ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ‘ಆಜಾದಿ ಕಾ ಅಮೃತ ಮಹೋತ್ಸವ’ ಸರಣಿ ಉಪನ್ಯಾಸ

ಶೇರ್ ಮಾಡಿ

ನೇಸರ ಆ.13: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ‘ಆಜಾದಿ ಕಾ ಅಮೃತ ಮಹೋತ್ಸವ’ ಪ್ರಯುಕ್ತ ಸರಣಿ ಉಪನ್ಯಾಸಗಳು ನಡೆಯಿತು. ಮೊದಲ ದಿನ ಭಾರತದ ಸಂವಿಧಾನದ ಕುರಿತಾದ ಉಪನ್ಯಾಸವು ನಡೆಯಿತು. ಕೆನರಾ ಕಾಲೇಜಿನ ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕರಾದ ಮತ್ತು ಖ್ಯಾತ ವಿದ್ವಾಂಸರಾದ ಡಾ ಅನಂತಕೃಷ್ಣ ಭಟ್ ರವರು ಉಪನ್ಯಾಸವನ್ನು ನೀಡಿದರು. ಅವರು ಮಾತನಾಡುತ್ತಾ “ಸಂವಿಧಾನದ ಅರಿವು ಪ್ರತಿಯೊಬ್ಬರಿಗೂ ಇರಲೇಬೇಕಾದದ್ದು. ಸಂವಿಧಾನವನ್ನು, ಕಾನೂನುಗಳನ್ನು ನಾವು ತಿಳಿದುಕೊಂಡರೆ, ಅದರಿಂದ ನಮಗೇ ಲಾಭ. ದೇಶವಾಸಿಗಳೆಲ್ಲರಿಗೆ ನ್ಯಾಯವನ್ನು, ಭದ್ರತೆಯನ್ನು ನಮ್ಮ ಸಂವಿಧಾನವು ಖಾತ್ರಿ ಪಡಿಸುತ್ತದೆ. ಹಾಗಾಗಿ ನಮ್ಮ ದೇಶದ ಸಂವಿಧಾನವು ಬಳವ ವಿಶಿಷ್ಟವಾಗಿ ವಿದ್ವಾಂಸರುಗಳಿಂದ ರಚಿಸಲ್ಪಟ್ಟಿದೆ” ಎಂದು ಹೇಳಿದರು.
ಅವರು ತಮ್ಮ ಉಪನ್ಯಾಸದಲ್ಲಿ ಸಂವಿಧಾನ ರಚನೆಯ ಪೂರ್ವ ಸನ್ನಿವೇಶವನ್ನು, ಸಂವಿಧಾನದ ಅನಿವಾರ್ಯತೆಯನ್ನು, ಅದರ ರಚನಾ ಪ್ರಕ್ರಿಯೆ ಮತ್ತು ಅದರಿಂದ ಆಗುತ್ತಿರುವ ಅನುಕೂಲಗಳನ್ನು ತಿಳಿಸಿದರು.

ಎರಡನೇಯ ದಿನದಂದು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಗುಡ್ಡಪ್ಪ ಬಲ್ಯರವರು ಭಾರತದ ಧ್ವಜ, ಅದರ ಇತಿಹಾಸ ಮತ್ತು ಅದರ ಪ್ರಾಮುಖ್ಯತೆಯಕುರಿತಾದ ವಿಚಾರಗಳನ್ನು ಮಂಡಿಸಿದರು. ಅವರು ಮಾತನಾಡುತ್ತಾ” ನಮ್ಮ ಧ್ವಜವು ನಮ್ಮ ಹೆಮ್ಮೆ. ಅದನ್ನು ಬಹಳ ಗೌರವಯುವಾಗಿ ಕಾಣಬೇಕು. ನಾಡಿದ್ದು ಆಗಸ್ಟ್ 13-15ರ ವರೆಗೆ ಪ್ರತಿಮನೆಗಳಲ್ಲಿ ಧ್ವಜವನ್ನು ಹಾರಿಸಿ, ಪ್ರಧಾನಿ ಮೋದಿಯವರ ಕರೆಯಂತೆ ರಾಷ್ಟ್ರದ ಸ್ವಾತಂತ್ರ್ಯ ದ ಸವಿಯು ಪ್ರತಿಮನೆಯಲ್ಲಿ ಕಾಣುವಂತಾಗಬೇಕು” ಎಂದು ಹೇಳಿದರು.

ಮೂರನೇ ದಿನದ ಉಪನ್ಯಾಸವನ್ನು ನಡೆಸಿಕೊಟ್ಟ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರು ವಿದ್ಯಾರ್ಥಿಗಳಿಗೆ ಅಗ್ನಿಪಥ ಯೋಜನೆಯ ಕುರಿತಾದ ಮಾಹಿತಿ ನೀಡಿದರು. ಅವರು ತಮ್ಮ ಉಪನ್ಯಾಸದಲ್ಲಿ” ವಿದ್ಯಾರ್ಥಿಗಳು ಸೇನೆಗೆ ಸೇರಿ ಭಾರತಾಂಬೆಯ ರಕ್ಷಣೆಯನ್ನು ಮಾಡುವ ಸಂಕಲ್ಪ ಮಾಡಬೇಕು ಮತ್ತು ಅದನ್ನು ಕಾರ್ಯಗತಗೊಳಿಸಲು ಶ್ರಮ ಪಡಬೇಕು. ಸರಕಾರವು ಅಗ್ನಿಪಥ ಯೋಜನೆಯ ಮೂಲಕ ರಾಷ್ಟ್ರ ಸೇವೆಯನ್ನು ಮಾಡಬಯಸುವವರಿಗೆ ಉತ್ತಮ ಅವಕಾಶವನ್ನು ನೀಡಿದೆ. ಅದಲ್ಲದೆ ಯುವಜನರಿಗೆ ಸೇವಾ ಅವಧಿಯ ನಂತರ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಅವಕಾಶಗಳನ್ನೂ ನೀಡಿದೆ” ಎಂದು ಹೇಳಿದರು.

ನಾಲ್ಕನೇ ದಿನದಂದು ಖ್ಯಾತ ಶಿಕ್ಷಣ ತಜ್ಞ ಮತ್ತು ಚಿಂತಕರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ರವರು ಪುರಾತನ ಭಾರತದ ಸಾಧನೆಗಳು ಎಂಬ ವಿಷಯವಾಗಿ ಉಪನ್ಯಾಸವನ್ನು ನೀಡಿದರು. ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ “ಭಾರತವು ಅತ್ಯಂತ ಪ್ರಾಚೀನ ಸಂಸ್ಕೃತಿಯನ್ನು ಹೊಂದಿದ ರಾಷ್ಟ್ರ. ಭಾರತದ ಪುರಾತನ ಗ್ರಂಥಗಳು ಇಂದಿಗೂ ಪ್ರಸ್ತುತ ಮತ್ತು ವೈಜ್ಞಾನಿಕವಾಗಿಯೂ ಸರಿ ಹೊಂದುತ್ತದೆ. ಪುರಾತನವಾದ ಈ ಗ್ರಂಥಗಳನ್ನು ಆಧರಿಸಿಯೇ ನಮ್ಮ ಆಚರಣೆ, ಜೀವನ ಶೈಲಿ ರೂಪುಗೊಂಡಿದೆ. ಆದರೆ ಆಧುನಿಕ ತಂತ್ರಜ್ಞಾನದ ಭರಾಟೆಯಿಂದ ನಮ್ಮ ನಿಜ ಜೀವನ ಶೈಲಿಯಿಂದ ದೂರ ಉಳಿಯುವಂತಾಗಿದೆ.ಇದು ನಮಗೆ ಮಾರಕ.ಆಧುನಿಕ ಶಿಕ್ಷಣವನ್ನು ತಿಳಿದುಕೊಂಡು, ನಮ್ಮ ಸಂಸ್ಕೃತಿಯನ್ನು ಅನುಷ್ಠಾನಕ್ಕೆ ತರಬೇಕು. ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಸಾರ್ಥಕತೆಯ ಬದುಕು ನಮ್ಮದಾಗಬೇಕು” ಎಂದು ಹೇಳಿದರು.

NESARA|| WhatsApp ||GROUPS

                             

 

                                                       

 

ಕಾಲೇಜಿನ ಪ್ರಾಂಶುಪಾಲರು ಮಾತನಾಡುತ್ತಾ “ಆಜಾದಿ ಕಾ ಅಮೃತ ಮಹೋತ್ಸವ’ದ ಪ್ರಯುಕ್ತ ಸರಣಿ ಉಪನ್ಯಾಸಗಳನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ರಾಷ್ಟ್ರ, ನಮ್ಮ ಮೌಲ್ಯಗಳ ಪರಿಚಯವನ್ನು ಮಾಡುವ ಯೋಜನೆಯೆ ನಮ್ಮದಾಗಿದೆ.ಉಪನ್ಯಾಸ ಮಾಡಿದ ಹಿರಿಯರು ಹೇಳಿದಂತೆ ನಡೆದು,ರಾಷ್ಟ್ರದ ಮಾದರಿ ಪ್ರಜೆಯಾಗಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ಅದಲ್ಲದೆ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯು ನಡೆಯಲಿದ್ದು ಖ್ಯಾತ ಚಿಂತಕರಾದ ಶ್ರೀ ಅರವಿಂದ ಚೊಕ್ಕಾಡಿಯವರು ಅತಿಥಿಯಾಗಿ ಆಗಮಿಸಿ ಉಪನ್ಯಾಸವನ್ನು ಮಾಡಲಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದರು. ಕಾಲೇಜಿನ ಉಪನ್ಯಾಸಕರಾದ ಶ್ರೀ ಚೇತನ್ ಎಂ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ತಿಲಕಾಕ್ಷ ಧನ್ಯವಾದ ಸಮರ್ಪಿಸಿದರು.

Leave a Reply

error: Content is protected !!