ಅಡ್ಡಹೊಳೆ ಅನಾರೋಗ್ಯದಿಂದ ಮಲಗಿದಲ್ಲೇ ವ್ಯಕ್ತಿ ನಿಧನ

ಶೇರ್ ಮಾಡಿ

ಶಿರಾಡಿ: ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡ ಹೊಳೆ ಎಂಬಲ್ಲಿ ಗೋವಿಂದ ಗೌಡ (38.ವ)ಅನಾರೋಗ್ಯದಿಂದ ಮಲಗಿದಲ್ಲೇ ವ್ಯಕ್ತಿ ನಿಧನ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಕೋಟೆ ಬೀದಿ ಕೋಣನೂರು ನ ಮೃತಪಟ್ಟ ಗೋವಿಂದ ಗೌಡ ಮತ್ತು ಆತನ ಪತ್ನಿ ಶಶಿಕಲಾ ಎಲ್ಎನ್ ಎಂಬವರು ಗುಜರಿ ಹೆಕ್ಕುವ ಕೆಲಸ ಮಾಡಿಕೊಂಡಿದ್ದು, ಗುಜಿರೆ ಹೆಕ್ಕುವ ಉದ್ದೇಶದಿಂದ ಸ್ವಂತ ಊರಾದ ಕೋಟೆ ಬೀದಿ ಕೋಣನೂರು ನಿಂದ ಆಪೆ ಆಟೋರಿಕ್ಷಾ ನಂಬರ್ ಕೆ ಎ 12. 6772 ರಲ್ಲಿ ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿಗೆ ಬಂದು ಅಲ್ಲಿಯೇ ಉಳಿದುಕೊಂಡಿದ್ದು. ಫೆಬ್ರವರಿ 3ರಂದು ಬೆಳಗ್ಗೆ ಮೃತಪಟ್ಟ ಗೋವಿಂದ ಗೌಡ ನಿಗೆ ಜ್ವರ ಕಾಣಿಸಿಕೊಂಡಿದ್ದು. ಸುಬ್ರಮಣ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು. ರಾತ್ರಿ ಮಲಗಿದ್ದವರು ಫೆಬ್ರವರಿ 4ರಂದು ಬೆಳಗ್ಗೆ ಮೃತ ಪಟ್ಟಿರುತ್ತಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!