ಹಾಡಹಗಲೇ ಚಾಕು ತೋರಿಸಿ ದರೋಡೆ; ಖದೀಮರ ಕೈಚಳಕ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆ

ಶೇರ್ ಮಾಡಿ

ಜಿಲ್ಲೆಯ ಆನೇಕಲ್ ತಾಲ್ಲೂಕಿನ ಮರಸೂರಿನಲ್ಲಿ ಡೈಲಿ ಫೈನಾನ್ಸ್ ಕಲೆಕ್ಷನ್ ಮಾಡುವ ಯುವಕರನ್ನೇ ಟಾರ್ಗೆಟ್ ಮಾಡಿದ ಖದೀಮರು, ಚಾಕು ತೋರಿಸಿ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.

ಹೌದು, ಹೊಸೂರಿನ ಶ್ರೀರಾಮ್ ಫೈನಾನ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಶಿವಲಿಂಗ ಹಾಗೂ ಚರಣ್ ಅತ್ತಿಬೆಲೆ ಎಂಬುವವರು ಚಂದಾಪುರ ಮಾರ್ಗವಾಗಿ ಡೈಲಿ ಫೈನಾನ್ಸ್ ಕಲೆಕ್ಷನ್ ಮಾಡಿಕೊಂಡು ಮರಸೂರಿನ ಎಸ್.ಎಲ್‌.ಎನ್ ಮೆಡಿಕಲ್ ಶಾಪ್ ಬಳಿ ಬಂದಿದ್ದಾರೆ. ಮೆಡಿಕಲ್ ಶಾಪ್​ನವರ ಬಳಿ ಫೈನಾನ್ಸ್ ಕಲೆಕ್ಷನ್ ಮಾಡಿ ಹಣವನ್ನ ಜೇಬಿನಲ್ಲಿ ಇಟ್ಟುಕೊಳ್ಳುವಷ್ಟರಲ್ಲಿ ಬೈಕ್​ನಲ್ಲಿ ಬಂದ ಮೂವರು ಅಸಾಮಿಗಳು, ಚಾಕು ತೋರಿಸಿ ಅವರ ಬಳಿ ಇದ್ದ 50 ಸಾವಿರಕ್ಕೂ ಅಧಿಕ ಹಣವನ್ನು ಕಸಿದು ಸಿನಿಮೀಯ ರೀತಿಯಲ್ಲಿ ಬೈಕ್​ನಲ್ಲಿ ಎಸ್ಕೇಪ್ ಆಗಿದ್ದಾರೆ.

ಇನ್ನು ಡೈಲಿ ಅಂಗಡಿಗಳ ಬಳಿ ಫೈನಾನ್ಸ್ ಹಣವನ್ನು ಕಲೆಕ್ಷನ್ ಮಾಡುವವರ ಬಳಿ ಹೆಚ್ಚು ಹಣ ಇರುತ್ತದೆ ಎಂದು ಪ್ಲ್ಯಾನ್ ಮಾಡಿದ್ದ ಅಸಾಮಿಗಳು, ಅವರನ್ನ ಹಿಂಬಾಲಿಸುತ್ತಿದ್ದರು. ಅದರಂತೆಯೇ ಶ್ರೀರಾಮ್ ಫೈನಾನ್ಸ್​ನ ಶಿವಲಿಂಗ ಹಾಗೂ ಚರಣ್ ಮೆಡಿಕಲ್ ಶಾಫ್​ ಬಳಿ ಫೈನಾನ್ಸ್ ಹಣವನ್ನ ಕಲೆಕ್ಷನ್ ಮಾಡಲು ಹೋದಾಗ ಖದೀಮರು ಚಾಕು ತೋರಿಸಿ ಯುವಕರ ಜೇಬಿಗೆ ಕೈಹಾಕಿ ಹಣವನ್ನ ರಾಬರಿ ಮಾಡಿದ್ದಾರೆ. ಅದರಲ್ಲೂ ಮಧ್ಯಾಹ್ನದ ವೇಳೆ ಜನವಸತಿ ಪ್ರದೇಶದಲ್ಲಿ, ಎಲ್ಲರೂ ಓಡಾಡುವ ಸಂಧರ್ಭದಲ್ಲಿಯೇ ದರೋಡೆಕೋರರು ಯಾವುದೇ ಭಯವಿಲ್ಲದೆ ಕೃತ್ಯ ಎಸಗಿದ್ದು, ಜನರನ್ನ ಬೆಚ್ಚಿ ಬೀಳಿಸಿದೆ. ಇನ್ನು ದರೋಡೆಕೋರರ ಕೈಚಳಕದ ದೃಶ್ಯ ಮೆಡಿಕಲ್ ಶಾಫ್​ನ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.

ಈ ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಸೂರ್ಯನಗರ ಪೋಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ ಹಾಡಹಗಲೇ ಈ ರೀತಿ ದರೋಡೆ ಪ್ರಕರಣಗಳು ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅದಷ್ಟು ಬೇಗ ಪೋಲೀಸರು ಈ ಖತರ್ನಾಕ್ ಖದೀಮರನ್ನು ಹೆಡೆಮುರಿ ಕಟ್ಟುವ ಮೂಲಕ ಸಾರ್ವಜನಿಕರಲ್ಲಿರುವ ಆತಂಕವನ್ನ ದೂರಮಾಡಬೇಕಿದೆ.

Leave a Reply

error: Content is protected !!