ವ್ಯಕ್ತಿಯೋರ್ವರಿಗೆ ಮರದ ದೊಣ್ಣೆಯಿಂದ ಹಲ್ಲೆ :ದೂರು ದಾಖಲು

ಶೇರ್ ಮಾಡಿ

ಮಿತ್ತಬಾಗಿಲು ಗ್ರಾಮದ ಶಾಂತಿಗುಡ್ಡೆ ಎಂಬಲ್ಲಿ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ ಪ್ರಕರಣ ನಡೆದಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಗೆ ಇಲ್ಲಿನ ಮೋಹನ (37)ಎಂಬವರು ದೂರು ನೀಡಿದ್ದು,ಅವರು ಅ.18 ರಂದು ಬೆಳಿಗ್ಗೆ ಮನೆಯಿಂದ ಕೂಲಿ ಕೆಲಸಕ್ಕೆಂದು ಹೊರಟು ಶಾಂತಿಗುಡ್ಡೆ ಎಂಬಲ್ಲಿ ಓಬಯ್ಯ ಪೂಜಾರಿ ಎಂಬವರೊಂದಿಗೆ ಮಾತನಾಡುತ್ತಿದ್ದಾಗ,ಸದಾಶಿವ ಯಾನೆ ಮೇದಪ್ಪ ಎಂಬಾತನು ಮೋಟರ್ ಸೈಕಲ್ ನಲ್ಲಿ ಬಂದು,ಅವಾಚ್ಯ ಶಬ್ದಗಳಿಂದ ನಿಂದಿಸಿ, ಮರದ ದೊಣ್ಣೆಯಿಂದ ತನಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಲಾಗಿದೆ.

Leave a Reply

error: Content is protected !!