ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವಠಾರದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ

ಶೇರ್ ಮಾಡಿ

ಶ್ರೀ. ಕ್ಷೇ.ಧ.ಗ್ರಾ.ಯೋಜನೆ ಬೀ.ಸಿ.ಟ್ರಸ್ಟ್. (ರಿ)ಕಡಬ ತಾಲೂಕು.ಹಾಗೂ ಶ್ರೀ ನರಸಿಂಹ ಸಂಪುಟ ಮಠ ಎಜುಕೇಶನ್ ಸೊಸೈಟಿ( ರಿ) ಸುಬ್ರಹ್ಮಣ್ಯ ಶ್ರೀ ಗೋಪಾಲಕೃಷ್ಣ ಕ್ರಷ್ಣ ಪ್ರೌಢಶಾಲೆ ಬಿಳಿನೆಲೆ,ಶ್ರೀ ವೇದವ್ಯಾಸ ವಿಧ್ಯಾಲಯ ಬಿಳಿನೆಲೆ ಮತ್ತು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಶೌರ್ಯವಿಪತ್ತು ಘಟಕ ಬಿಳಿನೆಲೆ ವಲಯ ಇದರ ಜಂಟಿ ಆಶ್ರಯದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮವು ಕಳೆದ ಗುರುವಾರದಂದು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವಠಾರದಲ್ಲಿ ನಡೆಯಿತು.

ಸತ್ಯಶಂಕರ್ ಮುಖ್ಯೋಪಾಧ್ಯಾಯರು ಶ್ರೀ. ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ.ಇವರು ಅಧ್ಯಕ್ಷತೆಯನ್ನು ವಹಿಸಿದ್ದರು., ಕ್ರಷ್ಣಾ ಶರ್ಮಾ ಸಂಚಾಲಕರು ಶ್ರೀ. ನರಸಿಂಹ ಸಂಪುಟ ಮಠ ಸುಬ್ರಹ್ಮಣ್ಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದ್ದರು.

ಪ್ರಶಾಂತ್ ಮುಖ್ಯೋಪಾಧ್ಯಾಯರು ವೇದವ್ಯಾಸ ವಿಧ್ಯಾಲಯ ಬಿಳಿನೆಲೆ,ಸತೀಶ್ ಎರ್ಕ ಅಧ್ಯಕ್ಷರು ಅಡಳಿತ ಸಮಿತಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಿಳಿನೆಲೆ, ರಾಜೇಶ್ ಒಗ್ಗು, ಅಧ್ಯಕ್ಷರು,ಶ್ರೀ. ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ಒಕ್ಕೂಟ, ಭವಾನಿಶಂಕರ ,ಪ್ರತಿನಿಧಿ ಶ್ರೀ. ಕ್ಷೇ.ಧ.ಗ್ರಾ.ಯೋಜನೆ ಶೌರ್ಯ ವಿಪತ್ತು ಘಟಕ ಬಿಳಿನೆಲೆ ವಲಯ,ಶ್ರೀ,ಗೋಪಾಲಕೃಷ್ಣ ಶಾಲೆಯ ಶಿಕ್ಷಕರು,ಹಾಗೂ ಬಿಳಿನೆಲೆ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು,ಬಿಳಿನೆಲೆ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

ಶ್ರೀ.ಗೋಪಾಲಕೃಷ್ಣ ಪ್ರೌಢ ಶಾಲೆಯ ಅಧ್ಯಾಪಕರಾದ ದಿನೇಶ್ ಕುಂದರ್ ನಿರೂಪಿಸಿದರು.

ಶ್ರಿ.ಕ್ಷೇ.ಧ.ಗ್ರಾ.ಯೋಜನೆಯ ವಲಯ ಮೇಲ್ವಿಚಾರಕ ಆನಂದ ಡಿ.ಬಿ.ಸ್ವಾಗತಿಸಿ,ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕಡಬ ತಾಲೂಕಿನ ಕ್ರಷಿಅಧಿಕಾರಿ ಸೋಮೇಶ್ ವಂದಿಸಿದರು.

Leave a Reply

error: Content is protected !!