ಕೋಲ್ಪೆ ಭರವಸೆಯ ಬೆಳಕು ಸಮಿತಿಯಿಂದ ಶ್ರಮದಾನ

ಶೇರ್ ಮಾಡಿ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾದ ಕಾರಣ ಸಂಪೂರ್ಣ ಕೆಸರುಮಯವಾಗಿ ನಡೆದಾಡಲು ಪರದಾಡುವ ಸ್ಥಿತಿ ಕೊಣಾಲು ಗ್ರಾಮದ ಕೋಲ್ಪೆ ಹಾಗೂ ಪಾಂಡಿಬೆಟ್ಟು ಸಂಪರ್ಕಿಸುವ ರಸ್ತೆಯಲ್ಲಿ ಕಂಡುಬಂದಿದೆ.

ಮಳೆಗಾಲದ ಸಮಯದಲ್ಲಿ ಕೆಸರುಮಯವಾಗಿದ್ದು ಅಂಗನವಾಡಿಯಿಂದ ಹಿಡಿದು ಕಾಲೇಜುವರೆಗಿನ ಮಕ್ಕಳಿಗೆ ಜನಸಾಮಾನ್ಯರಿಗೆ ನಡೆದಾಡಲು ಕಷ್ಟವಾಗಿರುವುದನ್ನು ಗಮನಿಸಿದ ಭರವಸೆಯ ಬೆಳಕು ಸಮಿತಿಯ ಅಧ್ಯಕ್ಷ ಬಿ ಎಸ್.ಶರೀಫ್ ತಂಙಳ್ರ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಹಿಡಿದು ಜನತಾ ಕಾಲೋನಿ ವರೆಗಿನ ರಸ್ತೆಯನ್ನು‌ ಸರಿಪಡಿಸುವ ಕಾರ್ಯ ಸಮಿತಿಯ ಸರ್ವ ಸದಸ್ಯರ ಸಹಕಾರದೊಂದಿಗೆ ನನಡೆಸಿದರು.

Leave a Reply

error: Content is protected !!