ಅಡ್ಡಹೊಳೆ: ಸ್ಟೇರಿಂಗ್ ತುಂಡಾಗಿ ಅಂಗಡಿಗೆ ನುಗ್ಗಿದ ಲಾರಿ

ಶೇರ್ ಮಾಡಿ

ನೆಲ್ಯಾಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಸ್ಟೇರಿಂಗ್ ತುಂಡಾಗಿ ಅಂಗಡಿಗೆ ನುಗ್ಗಿದ ಲಾರಿ.

ಮಂಗಳೂರಿನಿಂದ ಬೆಂಗಳೂರಿಗೆ ಕೆಂಪು ಮಣ್ಣು ಸಾಗಿಸುವ ಲಾರಿಯೊಂದು ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಹೆದ್ದಾರಿಯ ಬದಿಯಲ್ಲಿ ಇರುವ ತಂಗಚ್ಚನ್ ಎಂಬವರ ಮಾಲಕತ್ವದ ಟಯರ್ ಪಂಚರ್ ಹಾಗೂ ಹೋಟೆಲ್ ಗೆ ಸ್ಟೇರಿಂಗ್ ತುಂಡಾಗಿ ಲಾರಿ ಅಂಗಡಿಯ ಒಳಗೆ ನುಗ್ಗಿದೆ. ಇಬ್ಬರು ಮಹಿಳೆಯರ ಅಂಗಡಿ ಒಳಗಿದ್ದು ಅಲ್ಲಿಂದ ಓಡಿದ ಪರಿಣಾಮ ಯಾವುದೇ ಪ್ರಾಣಪಾಯ ಸಂಭವಿಸಲಿಲ್ಲ. ಎರಡು ಅಂಗಡಿಗಳು ಸಂಪೂರ್ಣ ಹಾನಿಯಾಗಿದೆ. ಲಾರಿ ಚಾಲಕ ಕಾರ್ತಿಕ್ ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Leave a Reply

error: Content is protected !!