ಶಿಶಿಲ: ನವರಾತ್ರಿ ಪ್ರಯುಕ್ತ ಕುಣಿತ ಭಜನಾ ಸಪ್ತಾಹ ಶುಭಾರಂಭ

ಶೇರ್ ಮಾಡಿ

ಶಿಶಿಲ ಇಲ್ಲಿನ ವೈಕುಂಠಪುರ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವದ ಪ್ರಯುಕ್ತ ದಿ.ಶ್ರೀನಿವಾಸ ಇಂದಬೆಟ್ಟು ಸ್ಮರಣಾರ್ಥ ಕುಣಿತ ಭಜನಾ ಸಪ್ತಾಹ ಅ.04ರಂದು ಶುಭಾರಂಭಗೊಂಡಿತು.

ಮೊದಲ ದಿನದ ಭಜನಾಸೇವೆಯನ್ನು ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ಹೊಸ್ತೋಟ ಅರಸಿನಮಕ್ಕಿ ಇದರ ಸದಸ್ಯರು ನಡೆಸಿಕೊಟ್ಟರು.

ಆಡಳಿತ ಮಂಡಳಿ ಪರವಾಗಿ ಭಜನಾ ಮಂಡಳಿ ಸದಸ್ಯರನ್ನು ಶಾಲು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.

Leave a Reply

error: Content is protected !!