ಹಾಸನದಲ್ಲಿ ಗರುಡ ಗ್ಯಾಂಗ್‌ನ ಇಸಾಕ್ ಬಂಧನ: ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರ ಗುಂಡೇಟು!

ಶೇರ್ ಮಾಡಿ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಗರುಡ ಗ್ಯಾಂಗ್‌ನ ಪ್ರಮುಖ ಸದಸ್ಯ ಇಸಾಕ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಣಿಪಾಲದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಈ ಬಂಧನ ನಡೆದಿದೆ.

ಆರೋಪಿಗಳನ್ನು ಮಣಿಪಾಲಕ್ಕೆ ಕರೆತರುವ ವೇಳೆ, ಇಸಾಕ್ ಪಿಸಾಬಿಸಲು ಬಿಡುವಂತೆ ಪೊಲೀಸರಿಗೆ ಹಠ ಮಾಡಿದ್ದು, ಆ ಸಂದರ್ಭದಲ್ಲಿ ಪೊಲೀಸರನ್ನು ತಳ್ಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಇದರಿಂದ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

ಆತ ತಪ್ಪಿಸಿಕೊಳ್ಳಲು ಮುಂದಾದಾಗ, ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕ ದೇವರಾಜ್ ಎಚ್ಚರಿಕೆ ಗುಂಡು ಹಾರಿಸಿದರು. ಇದರಿಂದಾದರೂ ಕೂಡ ನಿಲ್ಲದೆ ಓಡುವಾಗ, ಆತ ತಪ್ಪಿಸಿಕೊಳ್ಳದಂತೆ ಪೊಲೀಸ್ ತಂಡ ಆತನ ಕಾಲಿಗೆ ಗುಂಡು ಹಾರಿಸಿ ನಿಯಂತ್ರಿಸಿತು.

ಈ ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡ ಇಸಾಕ್ ಹಾಗೂ ಇಬ್ಬರು ಪೊಲೀಸರನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  •  

Leave a Reply

error: Content is protected !!