ನೆಲ್ಯಾಡಿ ಬೆಥನಿ ಐಟಿಐ ವಿದ್ಯಾರ್ಥಿಗಳಿಂದ ನಾವೀನ್ಯಮಯ ಸಾಫ್ಟ್‌ವೇರ್‌ಗಳ ಪ್ರಸ್ತುತೀಕರಣ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯ (ಐಟಿಐ) ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿಗಳಿಂದ ತಯಾರಿಸಲಾದ ನಾವೀನ್ಯಮಯ ಸಾಫ್ಟ್‌ವೇರ್‌ಗಳ ಪ್ರಾಜೆಕ್ಟ್‌ ಪ್ರಸ್ತುತೀಕರಣ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ಸುಮಾರು 20 ವಿದ್ಯಾರ್ಥಿಗಳ ತಂಡ, ಕಂಪ್ಯೂಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಸುನಿಲ್ ಜೋಸೆಫ್ ಅವರ ಮಾರ್ಗದರ್ಶನದಲ್ಲಿ ಎಸ್ ಆರ್ ಕೆ ಇಂಡಸ್ಟ್ರೀಸ್‌ಗೆ: ಸೇಲ್ಸ್, ಸ್ಟಾಕ್ ಹಾಗೂ ಬಿಲ್ಲಿಂಗ್ ವ್ಯವಸ್ಥೆಯ ಸಾಫ್ಟ್‌ವೇರ್‌, ಜೀವನ್ ಜ್ಯೋತಿ ಸ್ಪೆಷಲ್ ಸ್ಕೂಲ್, ಮರ್ದಾಳ‌ಗಾಗಿ: ವಿದ್ಯಾರ್ಥಿಗಳ ಡೇಟಾಬೇಸ್ ನಿರ್ವಹಣಾ ತಂತ್ರಾಂಶ, ಹಾಲು ಉತ್ಪಾದಕರ ಕೋ-ಆಪರೇಟಿವ್ ಸೊಸೈಟಿ, ಪೆರಿಯಡ್ಕ‌ಗೆ: ಸೇವಕರ ವಿವರ, ಹಾಲು ಸಂಗ್ರಹಣೆ, ಲಾಭದ ಹಂಚಿಕೆ ಹೀಗೆ ಹಲವು ಆರ್ಥಿಕ ಅಂಶಗಳನ್ನು ನಿರ್ವಹಿಸುವ ಸಾಫ್ಟ್‌ವೇರ್, ಜ್ಞಾನೋದಯ ಬೆಥನಿ ಪಿಯು ಕಾಲೇಜು‌ಗೆ ಕಚೇರಿ ದಾಖಲೆಗಳ ನಿರ್ವಹಣೆಗೆ ಅನುಕೂಲವಾಗುವ ತಂತ್ರಾಂಶ ಎಂಬ ನಾಲ್ಕು ವಿಭಿನ್ನ ಸಾಫ್ಟ್‌ವೇರ್‌ ಪ್ರಾಜೆಕ್ಟ್‌ಗಳನ್ನು ಅಭಿವೃದ್ಧಿಪಡಿಸಿ, ಸಂಸ್ಥೆಯ ಅಧ್ಯಾಪಕರು, ಅತಿಥಿಗಳು ಮತ್ತು ಸಹಪಾಠಿಗಳ ಮುಂದಿನ ವೇದಿಕೆಯಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದರು.

ರೆ.ಫಾ.ಜಕರಿಯಾಸ್ ನಂದಿಯಾಟ್ ಓಐಸಿ, ಮರ್ದಾಳ ಜೀವನ್ ಜ್ಯೋತಿ ಸ್ಪೆಷಲ್ ಸ್ಕೂಲ್ ಇದರ ನಿರ್ದೇಶಕರು, ವಿದ್ಯಾರ್ಥಿಗಳ ಪರಿಶ್ರಮ, ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯವನ್ನು ಮೆಚ್ಚಿದರು. ಬೆಥನಿ ಸಮೂಹ ಸಂಸ್ಥೆಯ ಸಂಚಾಲಕರಾದ ರೆ.ಫಾ.ಜೈಸನ್ ಸೈಮನ್ ಓಐಸಿ,ಬೆಥನಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ವರ್ಗೀಸ್ ಕೈಪನಡ್ಕ ಓಐಸಿ ಅವರು ಸುನಿಲ್ ಜೋಸೆಫ್ ಹಾಗೂ ವಿದ್ಯಾರ್ಥಿಗಳ ತಂಡವನ್ನು ಶ್ಲಾಘಿಸಿದರು.

ಬೆಥನಿ ಐಟಿಐ ಪ್ರಾಚಾರ್ಯರಾದ ಸಜಿ ಕೆ.ತೋಮಸ್ ಅವರು ಈ ಪ್ರಯತ್ನವನ್ನು ಹಿಗ್ಗಿ ಹೊಗಳುತ್ತಾ, ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ಅಧ್ಯಾಪಕರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.

ಸುನಿಲ್ ಜೋಸೆಫ್ ಕಾರ್ಯಕ್ರಮವನ್ನು ನಿರೂಪಿಸಿದರು. ತರಬೇತಿ ಅಧಿಕಾರಿ ಜಾನ್ ಪಿ.ಎಸ್. ವಂದಿಸಿದರು.

  •  

Leave a Reply

error: Content is protected !!