ಜೇಸಿಐ ಪಂಜ ಪಂಚಶ್ರೀ ಮತ್ತು ಮುಡೂರ್ ಇನ್ಫೋಟೆಕ್ ವತಿಯಿಂದ ತರಬೇತಿ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಮಾ.8: ಜೇಸಿಐ ಪಂಜ ಪಂಚಶ್ರೀ ಮತ್ತು ಮುಡೂರ್ ಇನ್ಫೋಟೆಕ್ ಆಶ್ರಯದಲ್ಲಿ ಪ್ರೇರಣಾ ಶೈಕ್ಷಣಿಕ ಸರಣಿ ತರಬೇತಿ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ “ಪರೀಕ್ಷೆ ಎದುರಿಸುವುದು ಹಾಗೂ ಉತ್ತಮ ಓದು” ತರಬೇತಿ ಕಾರ್ಯಕ್ರಮವು ಮಾ.8ರಂದು ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಗುತ್ತಿಗಾರು ಇದರ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾಯಿತು.

ವೀಕ್ಷಿಸಿ Subscribers ಮಾಡಿ

ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಗುತ್ತಿಗಾರು ಇದರ ಪೂರ್ವ ಅಧ್ಯಕ್ಷರಾಗಿರುವ ಲ/ಮೋಹನ್ ಕುಮಾರ್ ಎಂ.ಕೆ. ಭಾಗವಹಿಸಿದ್ದರು. ಸಭಾಧ್ಯಕ್ಷತೆಯನ್ನು ಜೆಸಿಐ ಪಂಜ ಪಂಚಶ್ರೀ ಯ ಘಟಕಾಧ್ಯಕ್ಷ ಜೇಸಿ ಶಿವಪ್ರಸಾದ್ ಹಾಲೆಮಜಲು ವಹಿಸಿದ್ದರು. ವೇದಿಕೆಯಲ್ಲಿ ವಲಯ ತರಬೇತುದಾರರಾದ ಜೇಸಿ.ಸವಿತಾರ ಮುಡೂರು, ಜೇಸಿ ಸೋಮಶೇಖರ ನೇರಳ, ಗುತ್ತಿಗಾರು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ನೆಲ್ಸನ್ ಡಿ ಕ್ಯಾಸ್ಟಲಿನೊ ಮತ್ತು ಕಾರ್ಯಕ್ರಮ ನಿರ್ದೇಶಕ ಜೇಸಿ.ಹರ್ಷಿತ್ ಮುಂಡೋಡಿ ಉಪಸ್ಥಿತರಿದ್ದರು. ಘಟಕದ ಪೂರ್ವ ಅಧ್ಯಕ್ಷ ಜೇಸಿ.ನಾಗಮಣಿ ಕೆದಿಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜೇಸಿ.ದೇವಿ ಪ್ರಸಾದ ಚಿಕ್ಮುಳಿ, ಸುಪ್ರೀತ್ ಗುಡ್ಡೆಮನೆ, ಜೀವನ್ ಶೆಟ್ಟಿ ಗದ್ದೆ ತರಬೇತುದಾರರನ್ನು ಮತ್ತು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಘಟಕದ ಸದಸ್ಯರು ಆಗಿರುವ ಜೇಸಿ.ರಜತ್ ಚಿದ್ಗಲ್ಲು, ಸರಕಾರಿ ಪದವಿ ಪೂರ್ವ ಕಾಲೇಜು ಇದರ ಪ್ರಾಂಶುಪಾಲರಾಗಿರುವ ಶ್ರೀಮತಿ ಚೆನ್ನಮ್ಮ ಮೋಹನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಜೇಸಿ ಕಾರ್ಯದರ್ಶಿ ಜೇಸಿ.ಕೌಶಿಕ ಕುಳ ಧನ್ಯವಾದ ಸಮರ್ಪಣೆ ಮಾಡಿದರು. ವಲಯ ತರಬೇತುದಾರರಾದ ಜೇಸಿ.ಸವಿತಾರ ಮುಡೂರು ಹಾಗೂ ಜೇಸಿ ಸೋಮಶೇಖರ ನೇರಳ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.

—ಜಾಹೀರಾತು—

Leave a Reply

error: Content is protected !!