

ನೂಜಿಬಾಳ್ತಿಲ: ಜೂನ್ 12ರಂದು ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಚುನಾವಣೆ ಸೌಹಾರ್ದಯುತವಾಗಿ ನಡೆಯಿತು. ನೂತನ ಅಧ್ಯಕ್ಷರಾಗಿ ಲಕ್ಷ್ಮಣಗೌಡ ಬಿಳಿನೆಲೆ, ಉಪಾಧ್ಯಕ್ಷರಾಗಿ ಭಾರತಿ ಪಾಲೆತಡಿ ಆಯ್ಕೆಯಾದರು.
ಸದಸ್ಯರಾಗಿ ವಿಕ್ರಮಾದಿತ್ಯ, ಶ್ರೀಮತಿ ಮೀರಾ, ಶ್ರೀಮತಿ ನಿಶಾ, ಶ್ರೀಮತಿ ನಂದಕುಮಾರಿ, ಶ್ರೀ ಕೃಷ್ಣ, ಶ್ರೀಮತಿ ಭಾರತಿ, ಶ್ರೀ ಪುತ್ತು ಕುನ್ಜಿ, ಶ್ರೀಮತಿ ಮಂಜುಳಾ, ಸುರೇಶ್, ಶ್ರೀಮತಿ ಅಮಿತಾ, ಸುರೇಶ್ ಬಿಜೇರು ಮತ್ತು ಶ್ರೀಧರ ಮೀನಾಡಿ ಅವರನ್ನು ಆಯ್ಕೆ ಮಾಡಲಾಯಿತು.
ಬೆಥನಿ ಸಂಸ್ಥೆಯ ನಿರ್ದೇಶಕರಾದ ರೆ.ಫಾ.ವಿಜೋಯ್ ವರ್ಗೀಸ್ ಅವರ ಮಾರ್ಗದರ್ಶನದಲ್ಲಿ, ಪ್ರಾಂಶುಪಾಲರಾದ ಜೋರ್ಜ್ ಟಿ.ಎಸ್ ಮತ್ತು ಮುಖ್ಯಗುರುಗಳಾದ ತೋಮಸ್ ಎ.ಕೆ. ಉಪಸ್ಥಿತರಿದ್ದರು
ಕಳೆದ ಎರಡು ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿದ್ದ ಶ್ರೀಧರ ಗೌಡ ಗೋಳ್ತಿಮಾರು ಅವರ ಸೇವೆಯನ್ನು ನೆನೆದು ಅವರಿಗೆ ವಿಶೇಷ ಧನ್ಯವಾದಗಳನ್ನು ಸಮರ್ಪಿಸಲಾಯಿತು.










