ಸೌತಡ್ಕ ಕ್ಷೇತ್ರಕ್ಕೆ ಚಲನಚಿತ್ರ ನಿರ್ದೇಶಕ,ನಿರ್ಮಾಪಕರಾದ ದಿನಕರ್ ತೂಗುದೀಪ ಭೇಟಿ

ಶೇರ್ ಮಾಡಿ

ಸೌತಡ್ಕ: ಚಲನಚಿತ್ರ ನಿರ್ದೇಶಕ,ನಿರ್ಮಾಪಕರಾದ ದಿನಕರ್ ತೂಗುದೀಪ ಅವರು ಪತ್ನಿ ಮಾನಸರೊಂದಿಗೆ ಶುಕ್ರವಾರದಂದು ಸೌತಡ್ಕದ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಸಂದರ್ಭದಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದ ವತಿಯಿಂದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸುಬ್ರಮಣ್ಯ ಶಬರಾಯ ಅವರು ದಿನಕರ್ ತೂಗುದೀಪ ದಂಪತಿಗಳಿಗೆ ಶಾಲು ಹಾಕಿ ಗೌರವ ಸಲ್ಲಿಸಿದರು.

ಈ ವೇಳೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ವ್ಯವಸ್ಥಾಪನ ಸಮಿತಿಯ ಸದಸ್ಯರು, ಹಾಗೂ ಅರ್ಚಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು

  •  

Leave a Reply

error: Content is protected !!