



ನೆಲ್ಯಾಡಿ: ಶ್ರೀರಾಮ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಅಧ್ಯಾಪಕ ವೆಂಕಟರಮಣ ಆರ್. ಅವರು ಯೋಗದ ಹಿನ್ನೆಲೆ, ಅದರ ಪ್ರಕಾರಗಳು ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮಕಾರಿತ್ವ ಕುರಿತು ವಿದ್ಯಾರ್ಥಿಗಳಿಗೆ ಸಂಪೂರ್ಣ ತಿಳಿವಳಿಕೆಯನ್ನು ನೀಡಿ “ಯೋಗವು ಕೇವಲ ಶರೀರದ ವ್ಯಾಯಾಮವಷ್ಟೇ ಅಲ್ಲ, ಮನಸ್ಸು ಮತ್ತು ಆತ್ಮದ ಶುದ್ಧಿಕರಣವೂ ಆಗಿದೆ. ದಿನನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ,” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲಯದ ಪ್ರಭಾರ ಮುಖ್ಯಶಿಕ್ಷಕಿ ಭಾಗೀರಥಿ ವಹಿಸಿದ್ದರು. ಸೌಮ್ಯ ಮಾತಾಜಿ ಸ್ವಾಗತಿಸಿದರು. ಕುಮಾರಿ ರಮ್ಯ ಮಾತಾಜಿ ವಂದಿಸಿದರು. ಶುಭರಾಣಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, ಶ್ಲೋಕ ಪಠಣ ನಡೆಯಿತು.







