ನೆಲ್ಯಾಡಿ ಶಬರೀಶ ಶಾಖೆ 11ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

ಶೇರ್ ಮಾಡಿ

ನೆಲ್ಯಾಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಮಂಗಳೂರು ಮಹಾನಗರ, ಉಪ್ಪಿನಂಗಡಿ ತಾಲ್ಲೂಕು ಶಬರೀಶ ಶಾಖೆಯ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನದ 11ನೇ ವರ್ಷದ ಆಚರಣೆಯು ಶನಿವಾರದಂದು ಕೌಕ್ರಾಡಿಯ ಶಬರೀಶ ಕಲಾ ಕೇಂದ್ರದಲ್ಲಿ ಅದ್ದೂರಿಯಾಗಿ ಜರುಗಿತು.

ಬೆಳಿಗ್ಗೆ 4.45ರಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರುಗಳಾದ ಹೇಮಾವತಿ, ಸುಧಾ ಹಾಗೂ ಶಿವಪ್ರಸಾದ್ ಅವರು ಆಧ್ಯಾತ್ಮಿಕ ಶ್ರದ್ಧೆಯಿಂದ ಅಗ್ನಿಹೋತ್ರ ನಡೆಸಿಕೊಟ್ಟರು. ಬಳಿಕ ಅಮೃತವಚನವನ್ನು ಯೋಗ ಬಂಧು ಆಕಾಶ್ ಓದಿದರು, ಪಂಚಾಂಗ ಪಠಣವನ್ನು ಶಿಕ್ಷಕರಾದ ಪ್ರಥಮ್ ನಿರ್ವಹಿಸಿದರು. ಮನೋವೈಜ್ಞಾನಿಕ ತಯಾರಿಕೆಗೆ ರಾಮಕೃಷ್ಣ ಹಾಗೂ ಉಸಿರಾಟದ ನಿಯಂತ್ರಣ ಮತ್ತು ಗಣಪತಿ ನಮಸ್ಕಾರ ಕುರಿತು ಹೇಮಾವತಿ ಪಾಠವನ್ನೂ ನೀಡಿದರು. ಪ್ರಾತ್ಯಕ್ಷಿಕೆಯಲ್ಲಿ ಶಿಕ್ಷಕರಾದ ಶಿವಪ್ರಸಾದ್ ಹಾಗೂ ಶಾಖಾ ಸಂಚಾಲಕರಾದ ರವಿಚಂದ್ರ ಭಾಗವಹಿಸಿದರು.

ಕಾರ್ಯಕ್ರಮಕ್ಕೆ ದೀಪ ಬೆಳಗಿ ಚಾಲನೆ ನೀಡಿದ ಅಯ್ಯಪ್ಪ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಸದಾನಂದ ಕುಂದರ್ ಅವರು ಯೋಗದ ಸಾಂಸ್ಕೃತಿಕ ಹಾಗೂ ಆರೋಗ್ಯಪೂರ್ಣ ಮಹತ್ವವನ್ನು ವಿವರಿಸಿ ಶುಭ ಹಾರೈಸಿದರು. ಜೊತೆಗೆ ಆಡಳಿತ ಮಂಡಳಿಯ ಸದಸ್ಯ ರವಿಪ್ರಸಾದ್ ಶೆಟ್ಟಿ, ತಾಲ್ಲೂಕು ಶಿಕ್ಷಣ ಸಹ ಪ್ರಮುಖ ಕೃಷ್ಣಪ್ಪ, ಯೋಗ ಶಿಕ್ಷಕರಾದ ಸುಧಾ, ಹೇಮಾವತಿ ಮತ್ತು ಯೋಗ ಬಂಧು ರಾಮಕೃಷ್ಣ ಉಪಸ್ಥಿತರಿದ್ದರು.

ಬೌದ್ದಿಕ್ ಅವಧಿಯಲ್ಲಿ ರಾಮಕೃಷ್ಣ ಯೋಗದ ಇತಿಹಾಸ, ಉಪಯೋಗಗಳು ಹಾಗೂ ಸಮಿತಿಯ ಪಯಣದ ಕುರಿತ ಚುಟುಕು ಮಾಹಿತಿ ನೀಡಿದರು.

ದ್ವಿತೀಯ ಅವಧಿಯಲ್ಲಿ ಆಯುಷ್ ಪಠ್ಯ ಕ್ರಮದಂತೆ ಶಿಕ್ಷಕರಾದ ಮುರಳಿ ಮೋಹನ್ ಅಸನಾಭ್ಯಾಸಗಳನ್ನು ವಿವರಿಸಿದರೆ, ಪ್ರಾತ್ಯಕ್ಷಿಕೆಯಲ್ಲಿ ಪ್ರಥಮ್ ಮತ್ತು ಸುಧಾ ಅವರು ಸಹಕರಿಸಿದರು. ತಾಲ್ಲೂಕು ಶಿಕ್ಷಣ ಸಹ ಪ್ರಮುಖ ಕೃಷ್ಣಪ್ಪ ಮಾರ್ಗದರ್ಶನ ನೀಡಿದರು. ಶಾಖಾ ಸಂಚಾಲಕರಾದ ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು. ಯೋಗ ಬಂಧು ಗಣೇಶ್ ರಶ್ಮಿ ವಂದಿಸಿದರು..

ಅಂತ್ಯದಲ್ಲಿ ಅನ್ನಪೂರ್ಣೇಶ್ವರಿ ಮಂತ್ರಭೋದನೆಯೊಂದಿಗೆ ಮುರಳಿ ಮೋಹನ್ ಅವರು ಪ್ರಸಾದ ವಿತರಣೆ ನಡೆಸಿದರು. ಸುಮಾರು 30 ಯೋಗ ಬಂಧುಗಳು ಹಾಗೂ 10 ಯೋಗೇತರ ಬಂಧುಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಬೆಳಿಗ್ಗೆ 6.30ಕ್ಕೆ ಸಮಾರಂಭ ಯಶಸ್ವಿಯಾಗಿ ಮುಕ್ತಾಯವಾಯಿತು.

  •  

Leave a Reply

error: Content is protected !!