


ಕೊಕ್ಕಡ: ರಾಜಸ್ಥಾನ ಹೈಕೋರ್ಟ್ನ ನ್ಯಾಯಮೂರ್ತಿ ಮುಖೇಶ್ ರಾಜ್ ಪುರೋಹಿತ್ ಅವರು ಶುಕ್ರವಾರದಂದು ಪತ್ನಿ ಸಹಿತ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿದರು.
ಸೌತಡ್ಕ ಮಹಾಗಣಪತಿ ದೇವಾಲಯಕ್ಕೆ ಭೇಟಿ ನೀಡಿ ರಂಗಪೂಜೆ ನೆರವೇರಿಸಿದರು. ವಿಶೇಷವೆಂದರೆ ಈ ವೇಳೆ ಸ್ಥಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೂ, ಪೌರಾಣಿಕ ಮಹತ್ವ ಹೊಂದಿರುವ ಬಯಲು ಆಲಯದಲ್ಲಿ ರಂಗಪೂಜೆ ನಡೆಯುವ ವೇಳೆಗೆ ಮಳೆ ತಾತ್ಕಾಲಿಕವಾಗಿ ನಿಂತಿದ್ದು, ನ್ಯಾಯಮೂರ್ತಿ ಈ ಅಪರೂಪದ ಅನುಭವಕ್ಕೆ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಹಿರಿಯ ವಕೀಲರಾದ ಮಹೇಶ್ ಕಜೆ ಅವರು ಉಪಸ್ಥಿತರಿದ್ದರು.









