ಜೇಸಿಐ ಉಪ್ಪಿನಂಗಡಿ ಘಟಕದ “ಸ್ಪಂದನ” ವಾರ್ತಾ ಪತ್ರಿಕೆ ಬಿಡುಗಡೆ

ಶೇರ್ ಮಾಡಿ

ನೇಸರ ಮಾ12.ಜೇಸಿಐ ಉಪ್ಪಿನಂಗಡಿ ಘಟಕದ 2022 ಸಾಲಿನ ಪತ್ರಿಕೆ “ಮನಸುಗಳ ಸ್ಪಂದನೆ…ಸಮಾಜದ ಬಲವರ್ಧನೆ” ಧ್ಯೇಯ ವಾಕ್ಯದಡಿ “ಸ್ಪಂದನ” ವಾರ್ತಾ ಪತ್ರಿಕೆ ಜನವರಿ ತಿಂಗಳ ಸಂಚಿಕೆಯನ್ನು ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿ.ಪಿಪಿಪಿ.ಪೊನ್ನುರಾಜ್ ಜೇಸಿಐ ಪುತ್ತೂರು ಘಟಕದ ಮುಂದಾಳತ್ವದಲ್ಲಿ ನಡೆದ ರಾಷ್ಟೀಯ ಉಪಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ಮುಳಿಯ ಸಮುದಾಯ ಭವನದಲ್ಲಿ ನಡೆದಾಗ ಬಿಡುಗಡೆ ಮಾಡಿ ಘಟಕದ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭಹಾರೈಸಿದರು.

ವೀಕ್ಷಿಸಿ Subscribers ಮಾಡಿ

ಈ ಕಾರ್ಯಕ್ರಮದಲ್ಲಿ ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷರು ಮತ್ತು ಪತ್ರಿಕೆಯ ಪ್ರಧಾನ ಸಂಪಾದಕರು ಜೇಸಿ.ಮೋಹನ್ ಚಂದ್ರ ತೋಟದಮನೆ ಮತ್ತು ಶ್ರೀಮತಿ ಭವಿತಾ ಮೋಹನ್ ಚಂದ್ರ ತೋಟದಮನೆ ಹಾಗೂ ಜೇಸಿ.ಪುನೀತ್ ಮಂಜಿಪಲ್ಲ ಉಪಸ್ಥಿತರಿದ್ದರು. ಜೇಸಿಐ ಪುತ್ತೂರು ಘಟಕದ ಅಧ್ಯಕ್ಷ ಜೇಸಿ.ಶಶಿರಾಜ್ ರೈ ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷರಾದ ಜೇಸಿ.ಸೆನೆಟರ್ ರೋಯನ್ ಉದಯ ಕ್ರಾಸ್ತಾ, ವಲಯ ಉಪಾಧ್ಯಕ್ಷರಾದ ಜೇಸಿ.ದೀಪಕ್ ಗಂಗೂಲಿ, ಜೇಸಿ.ಸ್ವಾತಿ ರೈ, ವಲಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಜೇಸಿ.ಪುರುಷೋತ್ತಮ ಶೆಟ್ಟಿ, ಜಗನ್ನಾಥ್ ರೈ, ಸುಳ್ಯ ಮತ್ತು ಪುತ್ತೂರು ತಾಲೂಕಿನ ವಿವಿಧ ಘಟಕಾಧ್ಯಕ್ಷರುಗಳು ಉಪಸ್ಥಿತರಿದ್ದರು.

Leave a Reply

error: Content is protected !!