ಶಿಬಾಜೆ: ಶಾಸಕ ಹರೀಶ್ ಪೂಂಜ ರಿಂದ ಬರ್ಗುಳ ಕಿಂಡಿ ಅಣೆಕಟ್ಟಿನ ಶಿಲಾನ್ಯಾಸ

ಶೇರ್ ಮಾಡಿ

ನೇಸರ ಮಾ12. ಶಿಬಾಜೆ ಗ್ರಾಮದ ಬರ್ಗುಳ ಎಂಬಲ್ಲಿ 3.8 ಕೋಟಿ ಅನುದಾನದ ಶಿಬಾಜೆ ಮತ್ತು ಶಿಶಿಲ ಗ್ರಾಮವನ್ನು ಸಂಪರ್ಕಿಸುವ ಸಂಪರ್ಕ ಸೇತುವೆ ಹಾಗೂ ಕಿಂಡಿ ಅಣೆಕಟ್ಟು(ಬರ್ಗುಳ ಕಟ್ಟ) ಇದರ ಶಿಲಾನ್ಯಾಸ ಕಾರ್ಯಕ್ರಮವು ಬರ್ಗುಳದಲ್ಲಿ ಮಾ.11 ರಂದು ಜರುಗಿತು.

ವೀಕ್ಷಿಸಿ Subscribers ಮಾಡಿ

ಶಿಲಾನ್ಯಾಸವನ್ನು ಶಾಸಕ ಹರೀಶ್ ಪೂಂಜ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯೋಗೀಶ ಆಲಂಬಿಲ,ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಶಿವರಾಮ ಶಿಶಿಲ, ಶಿಬಾಜೆ ಗ್ರಾ.ಪಂ ಅಧ್ಯಕ್ಷ ರತೀಶ್ ಗೌಡ, ಶಿಶಿಲ ಗ್ರಾ.ಪಂ ಅಧ್ಯಕ್ಷ ಸಂದೀಪ್, ಹತ್ಯಡ್ಕ ಸಹಕಾರಿ ಸಂಘದ ಉಪಾಧ್ಯಕ್ಷ ರಾಜು ಕೆ ಸಾಲಿಯಾನ್, ಶಿಬಾಜೆ ಗ್ರಾ.ಪಂ ಉಪಾಧ್ಯಕ್ಷ ವಿನಯಚಂದ್ರ, ಸದಸ್ಯೆ ವನಜ ವಿ. ಶೆಟ್ಟಿಗಾರ್, ಶ್ರೀರಾಮ್ ದಾಮ್ಲೆ, ಚೆರಿಯನ್ ಕೋಟೆಬಾಗಿಲು, ಶಿಬಾಜೆ ಗ್ರಾ.ಪಂ ಸದಸ್ಯ ದಿನಕರ್ ಕುರುಪ್, ಭಂಡಿಹೊಳೆ ಶಿಬಾಜೆ ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರು, ಪಂಚಾಯತ್ ಸದಸ್ಯರು, ಸಹಕಾರಿ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.

ಸನ್ಮಾನ
ಹತ್ಯಡ್ಕ ಸಹಕಾರಿ ಸಂಘದ ವತಿಯಿಂದ, ಭಂಡಿಹೊಳೆ ನಿವಾಸಿಗಳು, ಗುತ್ತು -ಪರಾರಿ -ದೇವಸ ನಿವಾಸಿಗಳು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.

 

—ಜಾಹೀರಾತು—

Leave a Reply

error: Content is protected !!