ನೀರಕಟ್ಟೆ: ಇಕೋ,ಕಾರು ಡಿಕ್ಕಿ-ಮೂವರಿಗೆ ಗಾಯ

ಶೇರ್ ಮಾಡಿ

 

ನೀರಕಟ್ಟೆ: ಇಕೋ,ಕಾರು ಡಿಕ್ಕಿ-ಮೂವರಿಗೆ ಗಾಯ

ನೆಲ್ಯಾಡಿ: ಇಕೋ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ಇಕೋದಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜು.1ರಂದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ನಡೆದಿದೆ.

ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಇಕೋ ಹಾಗೂ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕ್ರೇಟಾ ಕಾರು ನಡುವೆ ನೀರಕಟ್ಟೆಯಲ್ಲಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಇಕೋದಲ್ಲಿದ್ದ ಮೋನಪ್ಪ(82ವ.), ಫಾತಿಮಾ(35ವ.)ಹಾಗೂ ಸುಮಯ್ಯ(32ವ.)ಎಂಬವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

error: Content is protected !!