ಜೇಸಿಐ ಪರ್ಕಳ- ಸಾಮೂಹಿಕ ಸತ್ಯನಾರಾಯಣ ಪೂಜೆ, ಸನ್ಮಾನ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಮಾ.29: ಜೇಸಿಐ ಪರ್ಕಳ ಇದರ ವಿಶಂತಿ ವರ್ಷದ ಪ್ರಯುಕ್ತ ಹಮ್ಮಿಕೊಂಡ 15ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆಯು ತಾ.27.3.2022 ರಂದು ವಿಜೃಂಭಣೆಯಿಂದ ಜರಗಿತು. ಸುಮಾರು 1200 ಭಕ್ತಭಿಮಾನಿಗಳು ಭಾಗವಹಿಸಿದ್ದು. ವೇದಮೂರ್ತಿ ರಾಮಮೂರ್ತಿ ಭಟ್ ಇವರ ನೇತೃತ್ವದಲ್ಲಿ ವೇದಮೂರ್ತಿ ರಾಧಾಕೃಷ್ಣ ಭಟ್ ಇವರು ಧಾರ್ಮಿಕ ಪೂಜಾ ವಿಧಿ ವಿಧಾನ ನೆರವೇರಿಸಿದರು. ಈ ಸಂಧರ್ಭದಲ್ಲಿ 3 ಮಂದಿ ಸಮಾಜ ಸೇವಕರಾದ ಶ್ರೀ ಅಣ್ಣಪ್ಪ, ಶ್ರೀಮತಿ ಜಯಂತಿ, ಶ್ರೀಮತಿ ಸವಿತಾ ಕೊರಂಗ್ರಪಾಡಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೇಸಿ ವಲಯ ಉಪಾಧ್ಯಕ್ಷ JFM. ದೀಪಕ್ ಗಂಗೂಲಿ, ವಲಯ ನಿರ್ದೇಶಕರಾದ PPP.ಮರೀಯಪ್ಪ, ವಲಯಧಿಕಾರಿಗಳಾದ ಜೇಸಿ ಸಂತೋಷ ಜೈನ್, ಜೇಸಿ. ಅಕ್ಷತಾ ಗಿರೀಶ್, ಜೇಸಿ.ರಾಘವೇಂದ್ರ ಕರ್ವಾಲ್, ಘಟಕದ ಅಧ್ಯಕ್ಷೆ JFD.ಉಷಾ N ಕಲ್ಮಾಡಿ ಹಾಗೂ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೇಸಿ.ಜಸ್ವಂತ್ ಕಾರ್ಯಕ್ರಮ ನಿರೂಪಿಸಿದರು.

ವೀಕ್ಷಿಸಿ SUBSCRIBERS ಮಾಡಿ

—ಜಾಹೀರಾತು—

Leave a Reply

error: Content is protected !!