ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಯೋಧ ಹವಾಲ್ದಾರ್ ಹರಿಶ್ಚಂದ್ರ ಇಂದು ಸೇವಾ ನಿವೃತಿ

ಶೇರ್ ಮಾಡಿ

ನೇಸರ ಎ.30 .ಭಾರತೀಯ ಭೂ ಸೇನೆಯಲ್ಲಿ 20 ವರುಷಗಳಿಂದ ಜಮ್ಮು ಮತ್ತು ಕಾಶ್ಮೀರ ,ಓರಂಗಾಬಾದ್ ,ಮಹಾರಾಷ್ಟ್ರ ,ಸಿಯಾಚಿನ್ ,ಗ್ಲೇಸಿಯರ್ ಹಾಗೂ ಸಿಕಂದರಾಬಾದ್ ನಲ್ಲಿ ಸೇವೆ ಸಲ್ಲಿಸಿರುವ ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ದಿ.ಕಿಟ್ಟಣ್ಣ ಪೂಜಾರಿ ಹಾಗೂ ವೇದಾವತಿ ಕಿಟ್ಟಣ್ಣ ದಂಪತಿ ಪುತ್ರ ಹವಾಲ್ದಾರ್ ಹರಿಚಂದ್ರರವರು ಭಾರತೀಯ ಸೇನೆಯಿಂದ ಇಂದು ಸೇವಾ ನಿವೃತಿಗೊಳ್ಳಲಿದ್ದಾರೆ
ಮಾರ್ಚ್ 2002 ರಲ್ಲಿ ಸೇನೆಗೆ ಸೇರ್ಪಡೆಗೊಂಡಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ನೂಜಿಬಾಳ್ತಿಲ ಬೆಥನಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಉಪ್ಪಿನಂಗಡಿಯ ಪ.ಪೂ.ಕಾಲೇಜಿನಲ್ಲಿ ಪೂರೈಸಿದ್ದರು.ಆರ್ಟಿ ಮೀಡಿಮ್ ರೆಜಿಮೆಂಟ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಪತ್ನಿ ಪ್ರಮೀಳಾ ,ಮಕ್ಕಳಾದ ಅಂಸಿಕ ,ಪ್ರಣಮ್,ತಾಯಿ ವೇದಾವತಿ ಮತ್ತು ಸಹೋದರ ಉಮೇಶ್ ರವರೊಂದಿಗೆ ಮುಚ್ಚಿಲದಲ್ಲಿ ವಾಸವಾಗಿದ್ದಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ದೇವಿ ಮಹಾತ್ಮೆ

🔆 ಜಾಹೀರಾತು 🔆

Leave a Reply

error: Content is protected !!