ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಆಜಾದಿಕಾ ಅಮೃತ ಮಹೋತ್ಸವ ಪ್ರಯುಕ್ತ 75 ರಾಷ್ಟ್ರನಾಯಕರ ಲೇಖನ ಸಂಗ್ರಹ

ಶೇರ್ ಮಾಡಿ

ನೇಸರ ಆ.04: ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಆಜಾದಿಕಾ ಅಮೃತ ಮಹೋತ್ಸವ ಪ್ರಯುಕ್ತ 75 ರಾಷ್ಟ್ರನಾಯಕರ ಸಂಗ್ರಹಿತ ಲೇಖನಗಳನ್ನು ಸಂಗ್ರಹಿಸಿ ತಮ್ಮದೇ ಕೈಬರಹದ ಮೂಲಕ ಜೋಡಿಸಿ ಉಳಿದ ವಿದ್ಯಾರ್ಥಿಗಳಿಗೂ ಸ್ಪೂರ್ತಿ ನೀಡುವತ್ತ ಕಿರುಪ್ರಯತ್ನ ಮಾಡಿದ್ದರು.
ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವುದರ ಮೂಲಕ ಚಾಲನೆ ನೀಡಿದ ರೋ.ಜಗಜೀವನದಾಸ್ ರೈ ಇವರು ವಿದ್ಯಾರ್ಥಿನಿಯರಾದ 10ನೇ ತರಗತಿಯ ಕು.ಯುಕ್ತಶ್ರೀ ಮತ್ತು ಕು.ದೃಶಾ ಇವರ ಕಾರ್ಯತತ್ಪರತೆಯನ್ನು ಮೆಚ್ಚಿ, ಇನ್ನೂ ಇಂತಹ ಕಾರ್ಯವನ್ನು ಮುಂದುವರೆಸುವಂತೆ ಹುರಿದುಂಬಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.

“ಕೊರೋನ ಎಂಬ ಮಹಾಮಾರಿಯಿಂದ ಬಳಲುತ್ತಿದ್ದ ಆ ದಿನಗಳಲ್ಲಿಅಧ್ಯಾಪಕವೃಂದ ನಮಗೆ ಪಾಠವನ್ನು ಆನ್‍ಲೈನ್ ಮೂಲಕ ಬೋಧನೆ ಮಾಡುತ್ತಿದ್ದರು. ಬೋಧನೆಯ ಬಳಿಕ ನಮ್ಮ ಸಮಯವನ್ನು ಹೇಗೆ ಸದುಪಯೋಗಿಸಿಕೊಳ್ಳಬಹುದು ಎಂದು ಯೋಚಿಸಿದಾಗ ನನಗೆ ಮತ್ತು ನನ್ನ ಗೆಳತಿಗೆ ಒಂದು ಉಪಾಯ ಹೊಳೆಯಿತು. ನಾವಿಬ್ಬರೂ ದಿನಪತ್ರಿಕೆಗಳನ್ನು ಗಮನಿಸಿದಾಗ ಥಟ್ಟನೆ ರಾಷ್ಟ್ರನಾಯಕರ ಲೇಖನಗಳನ್ನು ಸಂಗ್ರಹಿಸಿ ಬರೆದಿಡುವ ಯೋಚನೆ ಮಾಡಿದೆವು. ಇಬ್ಬರೂ ಸೇರಿ 75 ಮಹಾಪುರುಷರ ಬಗ್ಗೆ ಸಂಗ್ರಹಿಸಿ ಬರವಣಿಗೆ ರೂಪಕ್ಕಿಳಿಸಿದೆವು. ಈ ಲೇಖನಗಳಲ್ಲಿ ನಮ್ಮ ದೇಶಕ್ಕಾಗಿ ಅವಿರತವಾಗಿ ಹೋರಾಡಿ ವೀರಮರಣವನ್ನುಗೈದವರ ಕುರಿತು ಸಂಗ್ರಹಿಸಿ ಬರೆಯಲಾಗಿದೆ. ಇದು ಒಂದು ರೀತಿಯಲ್ಲಿ ನಮಗೆ ಸ್ಪೂರ್ತಿಯ ವಿಚಾರವೂ ಆಗಿದೆ. ಸಮಯದ ಸದುಪಯೋಗವನ್ನು ಹೀಗೂ ಮಾಡಬಹುದು ಎಂಬುದನ್ನು ಅರಿತೆವು ಎಂದು ಸಂಗ್ರಹಿತ ಲೇಖನಗಳನ್ನು ತಯಾರಿಸಿ ಒಂದು ವಿಶಿಷ್ಟ ಪ್ರಯತ್ನವನ್ನು ಮಾಡಿದ 10ನೇ ತರಗತಿಯ ವಿದ್ಯಾರ್ಥಿನಿಯರಾದ ಕು.ಯುಕ್ತಶ್ರೀ ಮತ್ತು ಕು.ದೃಶಾ ಇವರು ನುಡಿದರು”.

error: Content is protected !!