ಕಡಬ: ಗಿಡವೋಂದು ಬೆಳೆಸಿ ಜನುಮದಿನವನ್ನು ಆಚರಿಸಿ : ರವಿಪ್ರಸಾದ್ ಆಲಾಜೆ

ಶೇರ್ ಮಾಡಿ

ನೇಸರ ಜೂ.29: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದ ರೆಂಜಿಲಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪರಿಸರ ಜಾಗೃತಿ ಮಾಹಿತಿ ಹಾಗೂ ಗಿಡಗಳ ನಾಟಿ ಮಾಡುವ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಪ್ರಾಸ್ತಾವಿಕ ವಾಗಿ ಮಾತನಾಡಿˌ ಪ್ರತೀ ಜೀವ ಸಂಕುಲನಕ್ಕೆ ಪ್ರಕೃತಿಯ ಕೊಡುಗೆ ಮಹತ್ತರವಾದುದು. ಧರ್ಮಸ್ಥಳ ಯೋಜನೆಯ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಪರಿಸರ ಸಂರಕ್ಷಣಾ ಜಾಗೃತಿ ಮೂಡಿಸುವ ಸಮುದಾಯದ ಕಾರ್ಯಕ್ರಮವೂ ಒಂದಾಗಿದೆ. ನಾವು ಪ್ರಕೃತಿಯ ಆಸರೆಯನ್ನು ಪಡೆದಷ್ಟು ಪ್ರಕೃತಿಯಲ್ಲಿನ ಸಸ್ಶ ಸಂಪತ್ತು ನಾಶವಾಗಿ ಶುದ್ದವಾದ ಗಾಳಿ ನೀರು ಬೆಳಕು ಪಡೆಯಲೂ ಮುಂದೊಂದುದಿನ ಶುಲ್ಕನೀಡುವಂತಾಗಬಹುದು. ಪ್ರತೀಯೋಬ್ಬ ವ್ಶಕ್ತಿಯೂ ತನ್ನ ಹುಟ್ಟಿದ ದಿನವನ್ನು ಮೋಜು ಮಸ್ತಿಯಿಂದ ಆಚರಿಸುವ ಬದಲು ಆ ಶುಭದಿನದ ನೆನಪಿಗಾಗಿ ಪರಿಸರದಲ್ಲಿ ಒಂದು ಗಿಡವನ್ನು ನೆಟ್ಟು ಪೋಸಿಸಿದರೆ ಮುಂದಿನ ಪೀಳಿಗೆಗೂ ಪ್ರಕೃತಿಯ ಸೊಬಗನ್ನು ಸವಿಯಲು ಸಹಕಾರಿಯಾಗುತ್ತದೆ. “ಮನೆಗೊಂದು ಮಗು ಮಗುವಿಗೊಂದು ಮರ” ಎಂಬಂತೆ ಪ್ರತೀ ಜೀವಿಗಳ ಬದುಕಿಗೂ ಗಿಡ ಮರಗಳ ಆಸರೆ ಅವಶ್ಶಕವಾಗಿರುತ್ತದೆ ಎಂದರು.

ಕಾರ್ಯಕ್ರಮವನ್ನು ಕಡಬ ಲಯನ್ಸ್ ಸಂಸ್ಥೆಯ ಅಧ್ಶಕ್ಷರಾದ ದಿನೇಶ್ ಆಚಾರ್ ರವರು ಉದ್ಘಾಟಿಸಿ ಮಾತನಾಡಿ ಪ್ರಕೃತಿಯ ವೈಪರಿತ್ಶಕ್ಕೆ ಮನುಷ್ಶರೇ ಮುಖ್ಶ ಕಾರಣ ಪರಿಸರದ ನಾಶ ಮಾನವನಿಂದ ನಡೆಯುತ್ತದೆ ನಾವು ಪರಿಸರವನ್ನು ಸಂರಕ್ಷಿಸಿದಷ್ಟು ಭೂಮಿಯ ಮೇಲೆ ಬದುಕುವ ಹಕ್ಕನ್ನು ಪಡೆಯುತ್ತಿರುತ್ತೇವೆ ಎಂದರು.
ಪರಿಸರ ಸಂರಕ್ಷಣೆಯ ಅಗತ್ಶತೆ ಹಾಗೂ ಮಕ್ಕಳು ಹಾಗೂ ಪೋಷಕರು ಪರಿಸರ ಸಂರಕ್ಷಣೆಯಲ್ಲಿ ತಮ್ಮ ಜವಭ್ದಾರಿಯನ್ನು ನಿರ್ವಹಿಸುವಂತೆ ನೂಜಿಬಾಳ್ತಿಲ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಶಕ್ತಿ ಗೋವಿಂದ ನಾಯ್ಕ ಬಿ ಮಾರ್ಗದರ್ಶನ ನೀಡಿ ಶುಭಹಾರೈಸಿದರು.

ಕಡಬ ಯುವಜನ ವೇದಿಕೆ ಅಧ್ಶಕ್ಷರು ಹಾಗೂ ಕಡಬ ತಾಲೂಕು ಜನಜಾಗೃತಿ ವೇಧಿಕೆ ಸದಸ್ಶರಾದ ಶಿವಪ್ರಸಾದ್ ಮೈಲೇರಿ ಯವರು ಮಾತನಾಡಿ ಧರ್ಮಸ್ಥಳ ಯೋಜನೆಯ ಸೌಲಭ್ಶಗಳು ಕೇವಲ ಸಂಘಗಳಿಗೆ ಸೀಮಿತವಾಗದೇ ಸಮುದಾಯದ ಅಭಿವೃಧ್ಧಿ ಪರ ಚಟುವಟಿಕೆಗಳಿಗೂ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಪೂಜ್ಶರ ಆಶಯದಂತೆ ಸಮಾಜದ ಕಟ್ಟಕಡೆಗಿನ ವ್ಶಕ್ತಿಯೂ ಸಮಾಜದ ಮುಖ್ಶವಾಹಿನಿಯಲ್ಲಿ ತೊಡಗಿಕೊಂಡು ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವ ಮಹತ್ತರವಾದ ಬದಲಾವಣೆಯಾಗಿದೆ. ಇದರ ಸದುಪಯೋಗವನ್ನು ಸಮಾಜದ ಪ್ರತಿಯೊಬ್ಬರೂ ಪಡೆದುಕೊಳ್ಳುವಂತಾಗಲಿ ಎಂದು ಶುಭಹಾರೈಸಿದರು.

ಶಾಲಾ ಮುಖ್ಶ ಶಿಕ್ಷರಾದ ಮೇದಪ್ಪ ಗೌಡ ಮಾತನಾಡಿ ಶಾಲಾಭಿವೃಧ್ಧಿಗೆ ಸಾರ್ವಜನಿಕರ ಸಂಘಸಂಸ್ಥೆಗಳ ಸಹಕಾರ ಅಗತ್ಶವಾಗಿದ್ದು ಧರ್ಮಸ್ಥಳ ಯೋಜನೆಯೂ ಶಿಕ್ಷಣ ಸಂಸ್ಥೆಗೆ ಅಪಾರವಾದ ಕೊಡುಗೆಯನ್ನು ನೀಡುವುದರೊಂದಿಗೆ ಸಮುದಾಯದ ಅಭಿವೃಧ್ಧಿಗೆ ಶ್ರಮಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಶಕ್ತಪಡಿಸಿ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಶಕ್ಷತೆಯನ್ನು ಶಾಲಾಭಿವೃಧ್ಧಿ ಸಮಿತಿ ಅಧ್ಶಕ್ಷರಾದ ಜಗದೀಶ್ ವಹಿಸಿದ್ದರು. ಸೇವಾಪ್ರತಿನಿಧಿ ಸುಗುಣ ಸ್ವಾಗತಿಸಿ. ಶಿಕ್ಷಕಿ ಶಕುಂತಲಾ ಧನ್ಶವಾದವಿತ್ತರು ಶಾಲಾ ಧೈಹಿಕ ಶಿಕ್ಷಕ ಬೇಬಿ ಯವರು ಕಾರ್ಯಕ್ರಮ ನಿರ್ವಹಿಸಿದರು.
ಶಾಲಾ ಪರಿಸರದಲ್ಲಿ ಹಲವಾರು ಜಾತಿಯ ಹಣ್ಣಿಗಿಡಗಳನ್ನು ನಾಟಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಲಾಮಕ್ಕಳು, ಪೋಷಕರು, ಒಕ್ಕೂಟದ ಪಧಾದಿಕಾರಿಗಳು, ಪ್ರಗತಿಬಂಧು, ಸ್ವಸಹಾಯ ಸಂಘಗಳ ಸದಸ್ಶರುಗಳು ಹಾಗೂ ಸೇವಾಪ್ರತಿನಿಧಿಗಳಾದ ನಳಿನಿ ಹಾಗೂ ಅಪರ್ಣ ಪಾಲ್ಗೊಂಡರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!