ಶ್ರೀ ಕ್ಷೇತ್ರ ಸುಬ್ರಮಣ್ಯದ ಆನೆಯು ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿಯೋರ್ವನನ್ನು ದೇವಸ್ಥಾನದ ಒಳಗಡೆ ಎತ್ತಿ ಎಸೆದ ಘಟನೆಯೊಂದು ನಡೆದಿದೆ.

ಶೇರ್ ಮಾಡಿ

ನೇಸರ ಡಿ.14: ಶ್ರೀ ಕ್ಷೇತ್ರ ಸುಬ್ರಮಣ್ಯದ ಆನೆಯು ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿಯೋರ್ವನನ್ನು ದೇವಸ್ಥಾನದ ಒಳಗಡೆ ಎತ್ತಿ ಎಸೆದ ಘಟನೆಯೊಂದು ನಡೆದಿದೆ. ಈ ಘಟನೆಯು ಎರಡು ವಾರಗಳ ಹಿಂದೆ ನಡೆದಿದೆ.ಇತ್ತೀಚಿಗೆ ಅದರ ವಿಡಿಯೋ ಈಗ ವೈರಲ್ ಆಗಿದೆ.ಆನೆಯ ಮಾವುತ ಘಟನೆ ನಡೆದಿರುವುದು ಹೌದು ಅಂತ ಒಪ್ಪಿಕೊಂಡಿದ್ದಾರೆ. ಶ್ರೀ ಕ್ಷೇತ್ರದ ಆನೆ ಯಶಸ್ವಿನಿಂದ ಎಸೆಯಲ್ಪಟ್ಟ ವ್ಯಕ್ತಿಯು ರಾತ್ರಿಯ ಪೂಜೆಗೆ ದೇವಸ್ಥಾನಕ್ಕೆ ಬಂದಿದ್ದರು. ಅವರು ಆನೆ ಬಳಿಯಿಂದ ಹಾದು ಹೋಗುತ್ತಿದ್ದರು. ಆನೆ ಹಠತ್ತಾಗಿ ಸೊಂಡಿಲಿನಿಂದ ಅವರನ್ನು ಎತ್ತಿ ನೆಲಕ್ಕೆ ಎಸೆದಿದೆ. ಆದರೆ ಮೆತ್ತಗೆ ಎಸೆದಿರುವ ಕಾರಣ ಅವರಿಗೆ ಯಾವುದೇ ತೊಂದರೆ ಸಂಭವಿಸಲಿಲ್ಲ. ಈ ಬಗ್ಗೆ ಮಾವುತ ಮಾಹಿತಿ ನೀಡಿದ್ದಾರೆ.

Leave a Reply

error: Content is protected !!