ನೆಲ್ಯಾಡಿ ರಾಮನಗರ ನೂತನ ದ್ವಜಸ್ತಂಬದ ಉದ್ಘಾಟನಾ ಸಮಾರಂಭ ಮತ್ತು ಧ್ವಜಾರೋಹಣ

ಶೇರ್ ಮಾಡಿ

ನೆಲ್ಯಾಡಿ ಗ್ರಾಮದ ರಾಮನಗರ ಶ್ರೀ ರಾಮ ಮಂದಿರದ ವಠಾರದಲ್ಲಿ ನೂತನ ದ್ವಜ ಸ್ತಂಭದ ಉದ್ಘಾಟನಾ ಸಮಾರಂಭ ಮತ್ತು ಧ್ವಜಾರೋಹಣ ಕಾರ್ಯಕ್ರಮ ನೆರವೇರಿತ್ತು. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಅಮೆೆತ್ತಿ ಮಾರುಗುತ್ತು ಹೊಸಮನೆ ಇವರಿಂದ ತನ್ನ ತಂದೆ ಕಳ್ಳಿಗೆ ಬೀಡು ದಿ.ವಾಸಪ್ಪ ಶೆಟ್ಟಿ ಮತ್ತು ಕೊಂಬಿಲ ದಿ.ಕಲ್ಯಾಣಿ ಶೆಟ್ಟಿ ಯವರ ಸ್ಮರಣಾರ್ಥ ನಿರ್ಮಿಸಿದ ನೂತನ ದ್ವಜ ಸ್ತಂಭವನ್ನು ಶ್ರೀರಾಮ ಮಂದಿರಕ್ಕೆ ಹಸ್ತಾಂತರಿಸಲಾಯಿತು.
ಗಂಗಾಧರ ಶೆಟ್ಟಿಯವರ ಹಿರಿಯ ಸಹೋದರಿ ಶ್ರೀಮತಿ ಪುಷ್ಪ ಬಾಲಕೃಷ್ಣ ರೈ ಸೊರಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ನೂತನ ಧ್ವಜಸ್ತಂಬಕ್ಕೆ ತೆಂಗಿನ ಕಾಯಿ ಒಡೆದು ಪುಷ್ಪಾರ್ಚನೆಯನ್ನು ಮಾಡಿ ಉದ್ಘಾಟಿಸಿದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜ ಇದರ ಉಪನ್ಯಾಸಕ ಗುಡ್ಡಪ್ಪ ಬಲ್ಯ ರವರು ಮಾತನಾಡಿ ನೂತನ ದ್ವಜಸ್ಥಂಭದ ಕೊಡುಗೆ ಅತ್ಯಂತ ಶ್ರೇಷ್ಠವಾದ ಕೊಡುಗೆಯಾಗಿದೆ ರಾಷ್ಟ್ರ ಪ್ರೇಮವನ್ನು ಅರಳಿಸುವ ಮತ್ತು ರಾಷ್ಟ್ರ ಪ್ರೇಮದ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕೊಡಲ್ಪಟ್ಟ ಈ ರಾಷ್ಟ್ರಧ್ವಜದ ಮೂಲಕ ನಾವೆಲ್ಲ ದೇಶಭಕ್ತಿಯನ್ನು ಜಾಗೃತಿಗೊಳಿಸಬೇಕಾಗಿದೆ ಅಮೆತ್ತಿಮಾರು ಗುತ್ತು ಮನೆತನದ ನನ್ನ ಶಿಷ್ಯ ಗಂಗಾಧರ ಶೆಟ್ಟಿ ಮತ್ತು ಸಹೋದರಿಯರು ಮಾಡಿದ ಈ ಪುಣ್ಯಕಾರ್ಯ ಶ್ಲಾಘನೀಯವಾಗಿದೆ ಎಂದರು.
ಶಾಸ್ತಾರೆಶ್ವರ ದೇವಸ್ಥಾನದ ಕೋಶಾಧಿಕಾರಿ ಸೀತಾರಾಮ ಗೌಡ ಕಾನಮನೆ ಯವರು ಮಾತನಾಡಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಗಂಗಾಧರ ಶೆಟ್ಟಿಯವರು ಕೊಡುಗೆಯಾಗಿ ನೀಡಿದ ನೂತನ ಧ್ವಜಸ್ಥಂಭ ಈ ಧಾರ್ಮಿಕ ಕೇಂದ್ರಕ್ಕೆ ಕಳಶಪ್ರಾಯವಾಗಿದೆ ಇದನ್ನು ಸಂರಕ್ಷಿಸಿ ಈ ಪುಣ್ಯ ಶ್ರದ್ಧಾ ಕೇಂದ್ರದ ಮೂಲಕ ಮಕ್ಕಳಲ್ಲಿ ದೇವರ ಬಗ್ಗೆ ಭಕ್ತಿ ಮತ್ತು ಹಿರಿಯರಲ್ಲಿ ಭಕ್ತಿ ಮತ್ತು ದೇಶಭಕ್ತಿ ಯನ್ನು ಬೆಳೆಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಎಲ್ಲರನ್ನು ಸ್ವಾಗತಿಸಿ ಮಾತನಾಡಿದ ಗಂಗಾಧರ ಶೆಟ್ಟಿಯವರು ನನ್ನ ತಂದೆ ಮತ್ತು ತಾಯಿಯ ಸ್ಮರಣಾರ್ಥ ದೇಶಪ್ರೇಮದ ಸಂಕೇತವಾಗಿ ಕೊಡಲ್ಪಟ್ಟ ಈ ದ್ವಜಸ್ತಂಬದ ಉದ್ಘಾಟನಾ ಸಮಾರಂಭ ನನ್ನ ಜೀವನದ ಪರಮ ಯೋಗವಾಗಿದೆ ಈ ಪುಣ್ಯ ಕಾರ್ಯದ ಮೂಲಕ ಸಿಗುವ ಭಾರತಮಾತೆಯ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ ಎಂದರು, ದೇಶಪ್ರೇಮ ಪ್ರತಿ ಹಳ್ಳಿಗಳಿಂದ ಪ್ರತಿ ಮನೆ ಮನೆಗಳಿಂದ ಪ್ರಾರಂಭವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಕರಂಬಳ್ಳಿ ಭಾಸ್ಕರ್ ಶೆಟ್ಟಿ, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ರವಿಪ್ರಸಾದ್ ಶೆಟ್ಟಿ, ಸೊರಕೆ ಬಾಲಕೃಷ್ಣ ರೈ, ಶ್ರೀ ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ರೈ ರಾಮನಗರ, ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷ ಜಯರಾಮಗೌಡ ನಾಲ್ಗೊತ್ತು, ಶ್ರೀ ಶಾಸ್ಥರೇಶ್ವರ ದೇವಸ್ಥಾನದ ಕೋಶಾಧಿಕಾರಿ ಸೀತಾರಾಮ ಗೌಡ ಕಾನಮನೆ, ಭಜನಾ ಮಂಡಳಿಯ ಕಾರ್ಯದರ್ಶಿ ರಾಧಾಕೃಷ್ಣ ಗೌಡ ಹುಣಸೆ ಬೆಟ್ಟು, ಪ್ರಗತಿಪರ ಕೃಷಿಕ ರಮೇಶ ಗೌಡ ನಾಲ್ಗೊತ್ತು, ಧಾರ್ಮಿಕ ಮುಂದಾಳುವಳಾದ ಶೀನಪ್ಪ ಗೌಡ ಬರೆಮೇಲು, ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಅಮ್ಮಿ ಗೌಡ ನಾಲ್ಗೊತ್ತು, ರಾಮನಗರ ಫ್ರೆಂಡ್ಸ್ ಅಧ್ಯಕ್ಷ ಮೌನೇಶ ಗೌಡ ಬಾರಿಕೆ, ಕಾರ್ಯದರ್ಶಿ ರಿಷಬ್ ಶೆಟ್ಟಿ, ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಕಾರ್ಯದರ್ಶಿ ಕಿರಣ್ ಗೌಡ ಪುತ್ತಿಲ ಮತ್ತು ಧಾರ್ಮಿಕ ಮುಂದಾಳುಗಳಾದ ನಿತಿನ್ ಮಾರ್ಲಾ ,ಜಗದೀಶ್ ಮಾರ್ಲ, ಜನಾರ್ದನ ಗೌಡ ಹೊಸ ಮನೆ, ಸಂಪತ್ ಕುಮಾರ್ ಶೆಟ್ಟಿ ರಾಮನಗರ, ಮೋನಪ್ಪ ರಾಮನಗರ  ರಾಮನಗರ ಫ್ರೆಂಡ್ಸ್ ಸದಸ್ಯರು, ಭಜನಾ ಮಂಡಳಿಯ ಸದಸ್ಯರು, ಊರಿನ ಹಿರಿಯರು ಉಪಸ್ಥಿತರಿದ್ದರು.

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣವನ್ನು ಶ್ರೀರಾಮ ಮಂದಿರದ ಅಧ್ಯಕ್ಷರಾದ ಚಂದ್ರಶೇಖರ ರೈ ರಾಮನಗರ ನೆರವೇರಿಸಿದರು ಅಮ್ಮಿ ಗೌಡ ಕಾರ್ಯಕ್ರಮ ನಿರೂಪಿಸಿದರು. ಶೀನಪ್ಪ ಗೌಡ ಬರೆಮೇಲು ವಂದಿಸಿದರು. ನಂತರ ಸಿಹಿ ತಿಂಡಿ ವಿತರಣೆ ನೆರವೇರಿತು. ಕಾರ್ಯಕ್ರಮದಲ್ಲಿ ಭಜನಾಮಂದಿರದ ಅರ್ಚಕ ಮತ್ತು ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ ದೇವರಿಗೆ ಪೂಜೆಯನ್ನು ಮಾಡಿ ಪ್ರಸಾದ ವಿತರಿಸಿದರು.

Leave a Reply

error: Content is protected !!