ಪ್ರಾಮಾಣಿಕತೆ ಮೆರೆದ ಕಡಬ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಕು.ರಶ್ಮಿ

ಶೇರ್ ಮಾಡಿ

ಕಡಬ: ಕಡಬ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬರು ಶಾಲೆಗೆ ಬರುವ ದಾರಿಯಲ್ಲಿ ಬಿದ್ದು ಸಿಕ್ಕಿದ ಚಿನ್ನದ ಆಭರಣವನ್ನು ಅದರ ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಕಡಬ ಸರಕಾರಿ ಪ್ರೌಢಶಾಲೆ ಇಲ್ಲಿನ ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕು.ರಶ್ಮಿ ಇವರು ಆ.26 ರ ಶುಕ್ರವಾರ ದಂದು ಬೆಳಿಗ್ಗೆ ಶಾಲೆಗೆ ಬರುವ ದಾರಿಯಲ್ಲಿ ಎಂಟು ಗ್ರಾಂ ತೂಕದ ಚಿನ್ನದ ಆಭರಣವು ಬಿದ್ದು ಸಿಕ್ಕಿದ್ದು ಅದನ್ನು ಶಾಲಾ ಮುಖ್ಯ ಶಿಕ್ಷಕರಾದ ಡಾ.ವೇದಾವತಿ ಹಾಗೂ ಸಹಶಿಕ್ಷಕರ ಸಮ್ಮುಖದಲ್ಲಿ ಅದರ ವಾರಸುದಾರರಾದ ಫಾತಿಮತ್ ಉನೈಸಾ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಡಬ ಆರಕ್ಷಕ ಠಾಣಾ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿಯವರು ಉಪಸ್ಥಿತರಿದ್ದು, ವಿದ್ಯಾರ್ಥಿನಿಯ ಪ್ರಾಮಾಣಿಕತೆಯನ್ನು ಶ್ಲಾಘಿಸಿ ಬಹುಮಾನ ನೀಡಿದರು.

Leave a Reply

error: Content is protected !!