ವಜ್ರಕವಚ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ಕೊಟ್ಟ ಉಡುಪಿ ಕೃಷ್ಣ

ಶೇರ್ ಮಾಡಿ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಮುಂಜಾನೆಯಿಂದ ಭಕ್ತರ ದಂಡು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಹರಿದು ಬರುತ್ತಿದೆ.

ಕಳೆದ ರಾತ್ರಿ ಅರ್ಘ್ಯ ಪ್ರಧಾನದ ನಂತರ ಭಕ್ತರು ಉಪವಾಸ ತ್ಯಜಿಸಿದ್ದಾರೆ. ಇಂದು ಶ್ರೀ ಕೃಷ್ಣ ಲೀಲೋತ್ಸವ ನಡೆಯುತ್ತದೆ. ಉಡುಪಿ ಕೃಷ್ಣನಿಗೆ ವಜ್ರಕವಚದ ಅಲಂಕಾರ ಮಾಡಲಾಗಿದೆ. ದೇವರು ಹುಟ್ಟಿದ ಸಂಭ್ರಮದಲ್ಲಿ ಭಕ್ತ ಸಾಗರ ಮಿಂದೆದ್ದಿದೆ.

ಮುಂಜಾನೆ ಆರು ಗಂಟೆಯಿಂದ ಜನ ನಿರಂತರವಾಗಿ ದೇವರ ದರ್ಶನ ಮಾಡುತ್ತಿದ್ದಾರೆ. ಕೃಷ್ಣ ಮಠದ ಗರ್ಭಗುಡಿ, ಅಷ್ಟಮಠವನ್ನು ವಿಶೇಷ ಹೂವುಗಳಿಂದ ಸಿಂಗಾರ ಮಾಡಲಾಗಿದೆ. ರಾತ್ರಿ ಯತನಕ ನಿರಂತರವಾಗಿ ಭಕ್ತರಿಗೆ ದೇವರ ದರ್ಶನ ಮಾಡುವ ಅವಕಾಶ ಇದೆ.

Leave a Reply

error: Content is protected !!