ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಕನ್ನಡ ಸಾಹಿತಿ ಜೆಸ್ಸಿ ಪಿ.ವಿ ಸನ್ಮಾನ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿಯ ಸಂತ ಅಲ್ಫೋನ್ಸ ಚರ್ಚ್ ನ ಸಂಡೆ ಸ್ಕೂಲ್ ಪ್ರಾರಂಭೋತ್ಸವದಂದು ಪ್ರತಿಭೋತ್ಸದಲ್ಲಿ ಸ್ಥಳೀಯ ಕನ್ನಡ ಲೇಖಕಿ ಜೆಸ್ಸಿ ಪಿ.ವಿ ಗೆ ಸಂತ ಅಲ್ಫೋನ್ಸ ಚರ್ಚ್ ನೆಲ್ಯಾಡಿ ಹಾಗೂ ಸ್ಥಳಿಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸನ್ಮಾನಿಸಲಾಯಿತು.

ಜೆಸ್ಸಿ ಪಿ.ವಿ ಅವರು ಕನ್ನಡ ಮತ್ತು ಆಂಗ್ಲ ಬಾಷೆಗಳಲ್ಲಿ ಸ್ನಾತಕೋತ್ತರ ಪದವಿ ಯನ್ನು ಪಡೆದು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಸೇವೆಯಲ್ಲಿದ್ದಾರೆ.

ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಲೇಖನ, ಕತೆ, ಕವನಗಳು ಪ್ರಕಟವಾಗಿವೆ. ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಭಾಷಣಗಳು ಪ್ರಸಾರವಾಗಿವೆ.

Leave a Reply

error: Content is protected !!