

ನೆಲ್ಯಾಡಿ: ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಗುರುವಾರದಂದು “ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮ ಮತ್ತು ಕ್ರೀಡಾ ಸ್ಪರ್ಧೆಗಳು” ವಿಜೃಂಭಣೆಯಿಂದ ನೆರವೇರಿದವು. ಕಾಲೇಜಿನ ಸಂಯೋಜಕರಾದ ಡಾ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜನಾರ್ಧನ ಗೌಡ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಪಿಎಂ ಶ್ರೀ ಉನ್ನತೀಕರಿಸಿದ ಶಾಲೆ ನೆಲ್ಯಾಡಿ ಅವರು ಉದ್ಘಾಟನೆ ನೆರವೇರಿಸಿದರು. ಅವರು ಮಾತನಾಡಿ, “ಜೀವನದ ಯಶಸ್ಸಿಗೆ ಕ್ರೀಡಾ ಚಟುವಟಿಕೆಗಳು ಬಹುಪಾಲು ಪೂರಕವಾಗಿದೆ. ಆರೋಗ್ಯಯುತ ದೇಹದಲ್ಲಿ ಆರೋಗ್ಯಯುತ ಮನಸ್ಸು ವಾಸಮಾಡುತ್ತದೆ. ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅತ್ಯಂತ ಉಪಯುಕ್ತವಾಗಿದೆ. ಓಟದಲ್ಲಿ ಟ್ರ್ಯಾಕ್ ತಪ್ಪದೇ ಓಡಿದರೆ ಗುರಿ ತಲುಪಬಹುದು. ಹಾಗೆಯೇ ಜೀವನದಲ್ಲೂ ನೀತಿ ಮತ್ತು ನಿಯಮ ಪಾಲನೆ ಮೂಲಕ ಯಶಸ್ಸು ಸಾಧಿಸಬಹುದು,” ಎಂದು ನುಡಿದರು.
ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಇತಿಹಾಸ ವಿಭಾಗದ ಡಾ.ಸೀತಾರಾಮ ಪಿ. ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ರಾಹುಲ್ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪಾವನ ಹಾಗೂ ಶ್ರೀಮತಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವೆರೋನಿಕಾ ಪ್ರಭಾ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ನೆಲ್ಯಾಡಿ ವಿವಿಯ ದೈಹಿಕ ಉಪನ್ಯಾಸಕರಾದ ಪಾವನಕೃಷ್ಣ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದ ಸದಸ್ಯರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹೆದ್ದಾರಿ ಬದಿಯ ಮನೆಯ ಗೇಟು ಬಳಿ ಕಾಡಾನೆಗಳು ನಿಂತು ರಸ್ತೆಯನ್ನು ದಾಟಲು ಯತ್ನಿಸುತ್ತಿದ್ದು, ಈ ವೇಳೆ ವಾಹನಗಳು ಸಂಚರಿಸುತ್ತಿರುವ ದೃಶ್ಯಗಳು ದೃಢವಾದ ಸಾಕ್ಷ್ಯವಾಗಿವೆ. ಈ ಪ್ರದೇಶದಲ್ಲಿ ಈ ಮೊದಲು ಕೂಡ ಕಾಡಾನೆಗಳ ಅಟ್ಟಹಾಸ ಕಂಡು ಬಂದಿದ್ದು, ಕೃಷಿ ತೋಟಗಳಿಗೆ ಹಾನಿಯೂ ಉಂಟಾಗಿದೆ.
ಸ್ಥಳೀಯ ಕೃಷ್ಣ ಮುರಾರಿ ಅವರು, “ಇಷ್ಟು ದಿನಕ್ಕೂ ಯಾವುದೇ ನಿರ್ದಿಷ್ಟ ಕಾರ್ಯಾಚರಣೆ ಫಲ ನೀಡಿಲ್ಲ. ಕಾಡಾನೆಗಳು ಆಗ ಬಂದು ಹಾನಿ ಮಾಡುತ್ತವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೆರ್ನಾಜೆಯ ಕುಮಾರ್ ಅವರೂ, “ಇಲ್ಲಿಯ ಜೀವನದ ಅವಿಭಾಜ್ಯ ಭಾಗವೇ ಈಗ ಕಾಡಾನೆ ಭಯ. ನಿತ್ಯವೂ ಎಲ್ಲಿ ಕಾಡಾನೆ ಬರುತ್ತದೆ ಎಂಬ ಆತಂಕದಲ್ಲಿ ಬದುಕುತ್ತಿದ್ದೇವೆ” ಎಂದು ದುಃಖಿಸಿದರು.
ಈ ಹಿಂದೆ ಎಪ್ರಿಲ್ 29ರಂದು ಅರ್ತ್ಯಡ್ಕದಲ್ಲಿ ಕಾಡಾನೆಯೊಂದು ಮಹಿಳೆಯನ್ನು ಕೊಂದು ಹಾಕಿದ್ದ ಹಿನ್ನಲೆಯಲ್ಲಿ, ಚಿಕ್ಕಮಗಳೂರಿನಿಂದ ಇಟಿಎಫ್ (ಎಲಿಫೆಂಟ್ ಟ್ಯಾಸ್ಕ್ ಫೋರ್ಸ್) ತಂಡವನ್ನು ಕರೆಸಿ ಕಾರ್ಯಾಚರಣೆ ನಡೆಸಲಾಗಿತ್ತು. ಮೇ 5 ರಿಂದ ಕಾರ್ಯಾರಂಭಿಸಿ, ಇತ್ತೀಚೆಗೆ ಅದು ಅಂತ್ಯಗೊಂಡಿತ್ತು. ಆದರೆ ಅದರ ಬೆನ್ನಲ್ಲೇ ಮತ್ತೆ ಕಾಡಾನೆಗಳು ಆನೆಗುಂಡಿ ಪರಿಸರದಲ್ಲಿ ಕಾಣಿಸಿಕೊಂಡಿರುವುದು ಹಲವರಿಗೆ ಅಚ್ಚರಿ ತಂದಿದೆ.
ಇಟಿಎಫ್ ಹಾಗೂ ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆಯು ಈಗ ಕಾಡಾನೆಗಳನ್ನು ಕನಕಮಜಲು ಅರಣ್ಯ ಭಾಗ ಅಥವಾ ಕೇರಳದ ಅರಣ್ಯ ಪ್ರದೇಶಕ್ಕೆ ತಿರುಗಿಸೋಲುವ ಪ್ರಯತ್ನದಲ್ಲಿದೆ. ಆದರೆ ಇಂತಹ ಕಾರ್ಯಾಚರಣೆಗಳು ಯಶಸ್ವಿಯಾಗದೇ ಇದ್ದರೆ, ಹತ್ತಿರದ ಗ್ರಾಮಗಳಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಲಿದೆ ಎಂಬುದರ ಬಗ್ಗೆ ಸ್ಥಳೀಯರು ಗಂಭೀರ ಚಿಂತೆ ವ್ಯಕ್ತಪಡಿಸುತ್ತಿದ್ದಾರೆ.












