

ನೆಲ್ಯಾಡಿ: ಗೃಹಿಣಿಯೇ ಮನೆಯ ಲಕ್ಷ್ಮೀ. ನಿಮ್ಮ ಪರಿಶ್ರಮ, ಸಹನೆ, ಪ್ರೀತಿ ಹಾಗೂ ತ್ಯಾಗವೇ ಕುಟುಂಬವನ್ನು ಬೆಳೆಯಿಸುತ್ತದೆ. ವರಮಹಾಲಕ್ಷ್ಮಿ ವ್ರತದಂದು ದೇವಿಯನ್ನು ಪೂಜಿಸುವುದಷ್ಟೇ ಅಲ್ಲ, ನಿಮ್ಮೊಳಗಿನ ಶಕ್ತಿ, ಜ್ಞಾನ ಮತ್ತು ಕರುಣೆಯ ಗುಣಗಳನ್ನು ಅರಿತು ಬೆಳೆಸಿಕೊಳ್ಳಿ. ಮನೆ-ಮನೆಗಳಲ್ಲಿ ಧಾರ್ಮಿಕ ಸಂಸ್ಕೃತಿ, ಮೌಲ್ಯಗಳು ಉಳಿಯಲು ಮಹಿಳೆಯರೇ ಶಕ್ತಿಯ ಮೂಲ” ಎಂದು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿಯವರು ಹೇಳಿದರು.

ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘ ಇದರ ಸಹಯೋಗದಲ್ಲಿ ಕಾಮಧೇನು ಶ್ರೀ ವರಮಹಾಲಕ್ಷ್ಮಿ ಸೇವಾ ಸಮಿತಿ ವತಿಯಿಂದ ಶುಕ್ರವಾರದಂದು ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಬರೀಶ ಕಲಾಮಂದಿರದಲ್ಲಿ ನಡೆದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಮಾಸ್ಟರ್ ಪ್ಲಾನರಿ ಸಮಗ್ರ ಅಭಿವೃದ್ಧಿ ಪ್ರಾಧಿಕಾರ ಕುಕ್ಕೆ ಸುಬ್ರಹ್ಮಣ್ಯ ಮಾಜಿ ಸದಸ್ಯ ಹಾಗೂ ಕಡಬ ತಾಲ್ಲೂಕು ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಮಾತನಾಡಿ ವರಮಹಾಲಕ್ಷ್ಮಿ ವ್ರತವು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ ಇದು ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಸಮಗ್ರ ಕಲ್ಯಾಣಕ್ಕಾಗಿ ಒಗ್ಗಟ್ಟಿನ, ದಯೆಯ ಹಾಗೂ ಸನ್ಮಾರ್ಗದ ಮಾರ್ಗದರ್ಶಕವಾಗಿದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಉಷಾ ಅಂಚನ್ ವಹಿಸಿ ಸ್ವಾಗತಿಸಿದರು.
ವೇದಿಕೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನರಿ ಸಮಗ್ರ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಲೋಲಾಕ್ಷ, ನೆಲ್ಯಾಡಿ – ಕೌಕ್ರಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ. ಸದಾನಂದ ಕುಂದರ್, ಕಾರ್ಯದರ್ಶಿ ಸುಧೀರ್ ಕುಮಾರ್, ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪ್ರಾವಿಣಿ ರೈ, ಸೌಮ್ಯ ಭರತ್, ನೆಲ್ಯಾಡಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಮೋಹನ್ ಕುಮಾರ್ ಕಟ್ಟೆಮಜಲು ಉಪಸ್ಥಿತರಿದ್ದರು.
ಸನ್ಮಾನ :
ಹರೀಶ್ ಇಂಜಾಡಿ, ಸುಧೀರ್ ಕುಮಾರ್, ಲೋಲಾಕ್ಷ, ಪ್ರಾವಿಣಿ ರೈ, ಸೌಮ್ಯ ಭರತ್, ಡಾ. ಸದಾನಂದ ಕುಂದರ್, ಸುಧೀರ್ ಕುಮಾರ್ ಇವರುಗಳನ್ನು ಸಭಾ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ವೈದಿಕ ಕಾರ್ಯಕ್ರಮವನ್ನು ಮಾಧವ ಸರಳಾಯ, ಅಮೃತ ಸರಳಾಯ ಅರ್ಚಕ ವರ್ಗದವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಡಬ ಬ್ಲಾಕ್ ಅಧ್ಯಕ್ಷರಾದ ಅಭಿಲಾಷ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಪಿ ವರ್ಗೀಸ್, ಸರ್ವೋತ್ತಮ ಗೌಡ, ಕಾಮಧೇನು ಮಹಿಳಾ ಸಹಕಾರ ಸಂಘದ ಕಾರ್ಯನಿರ್ವಣಾಧಿಕಾರಿ ಚೈತನ್ಯ ಹಾಗೂ ನಿರ್ದೇಶಕರು, ಸಂಘದ ಸದಸ್ಯರುಗಳು, ಪೂಜ್ಯಾರ್ತಿಗಳು ಉಪಸ್ಥಿತರಿದ್ದರು.
ಸುಧೀರ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










