







ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಪೂಸವಳಿಕೆ ನಿವಾಸಿ ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಹಾಗೂ ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ಜಿನ್ನಪ್ಪ ಗೌಡ ಪೂವಾಜೆ ಅವರ ಧರ್ಮಪತ್ನಿ ಲಲಿತಾ(56) ಅವರು ಅಲ್ಪಕಾಲದ ಅನಾರೋಗ್ಯದಿಂದ ಜೂ.16ರಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತಿ ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ಜಿನ್ನಪ್ಪ ಗೌಡ ಪೂವಾಜೆ, ಪುತ್ರಿಯರಾದ ರೇಷ್ಮಾ ಹಾಗೂ ರಶ್ಮಿ, ಪುತ್ರ ರಂಜಿತ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.



