ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸನ್ಮಾನ ಸಮಾರಂಭ

ಶೇರ್ ಮಾಡಿ

ನೇಸರ ಜೂ.16: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅಲಂಕಾರು ಇಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಜಯಶ್ರೀ ಎಸ್, ಜನಾರ್ಧನ ಗೌಡ ಕೆ. ಹಾಗೂ ಶ್ರೀಮತಿ ಕಮಲ ಕೆ. ಇವರುಗಳು ಪದೋನ್ನತಿ ಹೊಂದಿ ನೇರ್ಲ, ಗಂಡಿಬಾಗಿಲು ಹಾಗೂ ಸರ್ವ ಶಾಲೆಗಳಿಗೆ ವರ್ಗಾವಣೆಗೊಂಡಿರುವ ನಮ್ಮ ಶಾಲೆಯ ಶಿಕ್ಷಕರುಗಳಿಗೆ ಶಾಲಾ ಶಿಕ್ಷಕರ ಹಾಗೂ ಎಸ್.ಡಿ.ಎಂ.ಸಿ ಮತ್ತು ಪೋಷಕರ ವತಿಯಿಂದ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಗೋಪಾಲಕೃಷ್ಣ ಪಡ್ಡಿಲಾಯ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಮುತ್ತಪ್ಪ ಪೂಜಾರಿ ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸಿ ಎ ಬ್ಯಾಂಕ್ ಅಲಂಕಾರು, ರಾಮಕೃಷ್ಣ ಮಲ್ಲಾರ ಅಧ್ಯಕ್ಷರು ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ. ಇವರುಗಳು ಭಡ್ತಿ ಗೊಂಡ ಶಿಕ್ಷಕರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪದನಿಮಿತ್ತ ಎಸ್.ಡಿ.ಎಂ.ಸಿ ಸದಸ್ಯರು ರವಿ ಪೂಜಾರಿ. ಪ್ರಕಾಶ್.ಬಿ ಅಲಂಕಾರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಯಾನಂದ ಕರ್ಕೇರ. ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಿಂಗರಾಜು ಕೆಪಿ ಮುಖ್ಯಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರಾದ ಅಬೂಬಕ್ಕರ್ ನಕ್ಕರೆ, ಎ ಬಿ ಸುಂದರ
, ದಿನೇಶ್ ದೇವಾಡಿಗ ಹರೀಶ್ ಗೌಡ ನೆಕ್ಕರೆ, ಶ್ರೀಮತಿ ವಿನುತಾ, ಶ್ರೀಮತಿ ಸೌಮ್ಯ, ಶ್ರೀಮತಿ ಕಮಲ, ಶ್ರೀಮತಿ ಮೋಹಿನಿ, ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ನಸೀಮಾ, ಶಿಕ್ಷಕರಾದ ಶ್ರೀಮತಿ ವನಜ, ಶ್ರೀ ವಿಶ್ವ ನಾಯ್ಕ, ಅತಿಥಿ ಶಿಕ್ಷಕರಾದ ಶ್ರೀಮತಿ ವನಿತಾ, ಶ್ರೀಮತಿ ಪ್ರತಿಮಾ, ಶ್ರೀಮತಿ ರೋಶನಿ ಹಾಗೂ ಗೌರವ ಶಿಕ್ಷಕರಾದ ಶ್ರೀಮತಿ ಜ್ಯೋತಿ, ಶ್ರೀಮತಿ ರಮ್ಯ, ಶ್ರೀಮತಿ ಅಖಿಲ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿಯರಾದ ಶ್ರೀಮತಿ ಅಶ್ವಿನಿ ಕುಮಾರಿ, ವಾಣಿಶ್ರೀ ಮುಂತಾದವರು ಭಾಗಿಯಾಗಿದ್ದರು. ಮುಖ್ಯಗುರುಗಳು ನಿಂಗರಾಜು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಂದನಾರ್ಪಣೆಯನ್ನು ಜಯಪ್ರಕಾಶ್ ಜಿ ಪಿ ಇವರು ನೆರವೇರಿಸಿದರು. ಶ್ರೀಮತಿ ಸುಪ್ರಭಾ ಕಾರ್ಯಕ್ರಮ ನಿರೂಪಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!