ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದ ರಾಯಭಾರಿಯಾಗಿ ಉಡುಪಿಯ ಜೇಸಿ.ಎಚ್‌ಜಿಎಫ್.ಉದಯ ನಾಯ್ಕ.

ಶೇರ್ ಮಾಡಿ

ನೇಸರ ಜು.02: ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದ ರಾಯಭಾರಿಯಾಗಿ ಆಯ್ಕೆ ವಲಯ ಅಧ್ಯಕ್ಷ ರೊಯನ್ ಉದಯ ಕ್ರಾಸ್ತ, ವಲಯ ಕಾರ್ಯದರ್ಶಿ ಸೌಮ್ಯ ರಾಕೇಶ್, G&D ನಿರ್ದೇಶಕರು ಮರಿಯಪ್ಪ ಸಮಿತಿಯು ಆಯ್ಕೆ ಮಾಡಿರುತ್ತಾರೆ. ದಿನಾಂಕ ಜುಲೈ 3ನೇ ತಾರೀಕು ಭಾನುವಾರ ದಕ್ಷಿಣ ಕನ್ನಡದ ವಿಟ್ಲದಲ್ಲಿ ನಡೆಯುವ ಜೆಸಿಐ ವಲಯ 15ರ ಅತಿ ದೊಡ್ಡ ಸಮ್ಮೇಳನ ಆಗಿರುವ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಜೇಸಿಐ ವಲಯ 15ರ ಸ್ಕಾಲರ್ಶಿಪ್ ವಿಭಾಗದಲ್ಲಿ ವಲಯ ಸಂಯೋಜಕರು ಆಗಿರುತ್ತಾರೆ. ಕಳೆದ ವರ್ಷ ಜೇಸಿಐ ಉಡುಪಿ ಸಿಟಿ ಯ ಅಧ್ಯಕ್ಷ ಸಾರಥ್ಯವನ್ನು ವಹಿಸಿದ್ದರು. ಇವರು ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸ್ವಚ್ಛಭಾರತ ಫ್ರೆಂಡ್ಸ್ ಮತ್ತು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ಕಾರ್ಯಕಾರಿ ಸಮಿತಿಯ ಸದಸ್ಯರು. ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ನ ಮಾರಾಟ ವಿಭಾಗದ ಹಿರಿಯ ಮಾರುಕಟ್ಟೆ ಪ್ರಬಂಧಕರಾಗಿ, ಎಲ್ಐಸಿ ಪ್ರತಿನಿಧಿಯಾಗಿಯೂ, ಹೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ(HRFI) ಉಡುಪಿ ವಿಭಾಗದ ಸ್ಥಾಪಕರು, ಅಧ್ಯಕ್ಷರು ಕಾರ್ಯಕಾರಣಿ ನಿರ್ದೇಶಕರಾಗಿಯೂ ಈಗ ನಿರ್ದೇಶಕರಾಗಿಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ನಿರಂತರ ಹೋಂ ಡಾಕ್ಟರ್ ಫೌಂಡೇಶನ್ ಸದಸ್ಯರಾಗಿ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!