ನೂಜಿಬಾಳ್ತಿಲ: ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ-ಸಮಿತಿ ರಚನೆ

ಶೇರ್ ಮಾಡಿ
Photo by :Latheesh

ಕಡಬ: ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ 2022ರ ಫೆಬ್ರವರಿ ತಿಂಗಳಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿ ಸಭೆ ಬುಧವಾರ ದೇವಳದಲ್ಲಿ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ವೆಂಕಟ್ರಮಣ ಎಚ್.ಎಸ್. ಅವರನ್ನು ಆಯ್ಕೆ ಮಾಡಲಾಯಿತು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜಾ ಅವರನ್ನು ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಯಿತು.ಕಾರ್ಯದರ್ಶಿಗಳಾಗಿ ರಾಧಕೃಷ್ಣ ಎಸ್.ಅಡೆಂಜ, ಸುಧಾಕರ ಗೌಡ ಸಾಂತ್ಯಡ್ಕ, ಜಲಜಾಕ್ಷಿ ಮೂಡೆಜಾಲು, ಜಯಪ್ರಕಾಶ್ ಪೆತ್ತಳ, ಕೋಶಾಧಿಕಾರಿಯಾಗಿ ರವೀಂದ್ರ ನಿಡ್ಡೋ ಸೇರಿದಂತೆ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳು, ಸದಸ್ಯರನ್ನು ಆಯ್ಕೆ ಮಾಡಲಾಯಿತು.ದೇವಳದ ಆಡಳಿತ ಮೊಕ್ತೇಸರ ಸಂಜೀವ ಗೌಡ ಅಡೆಂಜ, ಆಡಳಿತ ಸಮಿತಿ ಅಧ್ಯಕ್ಷ ಕರುಣಾಕರ ಇಚಿಲಡ್ಕ, ಕಾರ್ಯದರ್ಶಿ ರಾಧಕೃಷ್ಣ ಎಸ್.ಅಡೆಂಜ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅನಿಲ್ ಕೆರ್ನಡ್ಕ, ಪ್ರಮುಖರಾದ ರಘುರಾಜ ಕೆರ್ನಡ್ಕ, ಕೆಂಚಪ್ಪ ಗೌಡ ಕೆರ್ನಡ್ಕ, ವೆಂಕಟ್ರಮಣ ಎಚ್.ಎಸ್., ಜಯಪ್ರಕಾಶ್ ಮೂಡೆಜಾಲು, ಬಾಲಚಂದ್ರ ಕೆರ್ನಡ್ಕ, ಪದ್ಮನಾಭ ಗೌಡ ಕೆರ್ನಡ್ಕ, ಮೋನಪ್ಪ ಗೌಡ ಅರಿಮಜಲು, ರವೀಂದ್ರ ನಿಡ್ಡೋ, ಶೀನಪ್ಪ ಗೌಡ ಕೂರ್ನೂಜಿ, ರಾಮಚಂದ್ರ ಎಸ್., ಕೇಶವ ಗೌಡ ಅಡೆಂಜ ಸೇರಿದಂತೆ ಊರಿನ ಭಕ್ತರು ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡಿದರು. ದುರ್ಗಾಪ್ರಸಾದ್ ಕೆ.ಪಿ. ಸ್ವಾಗತಿಸಿದರು. ಕಿಟ್ಟು ಕೆ. ಕಲ್ಲುಗುಡ್ಡೆ ವಂದಿಸಿದರು.

[foogallery id=”1098″]

Leave a Reply

error: Content is protected !!