ಕಾಂಚನ: ಪೂರ್ವ ವಿದ್ಯಾರ್ಥಿ ಸಂಘದ ಮಹಾಸಭೆ: ಅಧ್ಯಕ್ಷ ಶ್ರೀ ಕೃಷ್ಣ ಪ್ರಸಾದ್ ಅಂಬಟೆಮಾರ್; ಕಾರ್ಯದರ್ಶಿ ಶ್ರೀ ರಾಮಚಂದ್ರ ಕಾಂಚನ ಆಯ್ಕೆ

ಶೇರ್ ಮಾಡಿ

ನೇಸರ ಆ.09: ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ ಇದರ ಪೂರ್ವ ವಿದ್ಯಾರ್ಥಿ ಸಂಘದ ಮಹಾಸಭೆ ನಿವೃತ್ತ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು.

ನಿವೃತ್ತ ಕನ್ನಡ ಶಿಕ್ಷಕ ಶ್ರೀ ಕೃಷ್ಣಪ್ಪ ಗೌಡ, ನಿವೃತ್ತ ಚಿತ್ರ ಕಲಾ ಶಿಕ್ಷಕ ಸುಬ್ರಹ್ಮಣ್ಯ ಉಪಾಧ್ಯಾಯ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಸೂರ್ಯ ಪ್ರಕಾಶ ಸಭೆಯಲ್ಲಿ ಉಪಸ್ಥಿತರಿದ್ದು, ಮಾರ್ಗದರ್ಶನ ಮಾಡಿದರು. ಸಂಘದ ಅಧ್ಯಕ್ಷರಾಗಿ ಕೃಷ್ಣಪ್ರಸಾದ್ ಅಂಬಟೆಮಾರ್, ಉಪಾಧ್ಯಕ್ಷರಾಗಿ ಮುರಲಿಕೃಷ್ಣ, ಶ್ರೀಮತಿ ರತಿ ದಾಮೋದರ ,
ಕಾರ್ಯದರ್ಶಿ ರಾಮಚಂದ್ರ, ಜೊತೆ ಕಾರ್ಯದರ್ಶಿ ನಾಗೇಶ್ ಕಾರಂತ, ಖಜಾಂಜಿ ಅನಿಲ್ ಪಿಂಟೊ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮೋನಪ್ಪ ಡೆಂಬಳೆ, ಹೊನ್ನಪ್ಪ ಆಲಂತಾಯ, ವೀರಸ್ವಾಮಿ ಕಾಂಚನ, ನವೀನ್ ಕೆ., ಭರತ್, ಚೈತ್ರಾ, ದೀಪ್ತಿ, ಪ್ರಜ್ವಲ್, ಚೇತನ್ ಕುಮಾರ್, ಸನ್ನಿಧಿ, ದೀಪಕ್, ಹರ್ಷಿತ್ ಹಾಗೂ ಮೋಹನ್ ಚಂದ್ರ ತೋಟದ ಮನೆ ಆಯ್ಕೆ ಮಾಡಲಾಯಿತು.

Leave a Reply

error: Content is protected !!