ಮಾನಸಿಕ ಒತ್ತಡದಿಂದ ನೇಣಿಗೆ ಶರಣಾದ ನೆಲ್ಯಾಡಿ ಯುವಕ

ಶೇರ್ ಮಾಡಿ

ನೇಸರ ಆ.09: ನೆಲ್ಯಾಡಿ ಸಮೀಪದ ಹೊಸವಕ್ಲು ನಿವಾಸಿ ಅಭಿಷೇಕ್.ವಿ(36)ಮಾನಸಿಕ ಒತ್ತಡದಿಂದಾಗಿ ಇಂದು ಬೆಳಗ್ಗೆ ಸ್ವಗೃಹದ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಮೈಸೂರಿನ ಬಾರ್ ಒಂದರಲ್ಲಿ ಉದ್ಯೋಗದಲ್ಲಿ ಇದ್ದರು. ಆಗಸ್ಟ್ 7ರಂದು ಮನೆಗೆ ಬಂದಿದ್ದ ಇವರು, ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವೃತರ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವೃತರು ತಂದೆ ವಾಸುದೇವ ಗೌಡ, ತಂಗಿ ಅಪೂರ್ವ ರವರನ್ನು ಅಗಲಿದ್ದಾರೆ.

Leave a Reply

error: Content is protected !!