ನೈಋತ್ಯ ರೈಲ್ವೆಯ ವಾಣಿಜ್ಯ ವ್ಯವಸ್ಥಾಪಕಿ ಪ್ರಿಯಾ ಶೆಟ್ಟಿ – ಧರ್ಮಸ್ಥಳ, ಸೌತಡ್ಕ, ಪಟ್ಲಡ್ಕ ಹಾಗೂ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ

ಶೇರ್ ಮಾಡಿ

ನೇಸರ ಆ.13: ನೈಋತ್ಯ ರೈಲ್ವೆಯ ವಾಣಿಜ್ಯ ವ್ಯವಸ್ಥಾಪಕಿ ಪ್ರಿಯಾ ಶೆಟ್ಟಿ ಇಂದು ತಂದೆ ತಾಯಿಯ ಜೊತೆಗೆ ಕುಟುಂಬ ಸಮೇತರಾಗಿ ಧರ್ಮಸ್ಥಳ, ಸೌತಡ್ಕ, ಪಟ್ಲಡ್ಕ ಹಾಗೂ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ, ದೇವಳದ ವತಿಯಿಂದ ಗೌರವ ಆತಿಥ್ಯವನ್ನು ಪಡೆದು ಸೌತಡ್ಕ ದೇವಾಲಯಕ್ಕೆ ಆಗಮಿಸಿದರು. ದೇವಳದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಶಾಲು ಹೊಂದಿಸಿ ಗೌರವಿಸಿದರು.
ಬಳಿಕ ಕೌಕ್ರಾಡಿ ಗ್ರಾಮದ ಪಟ್ಲಡ್ಕ ಆದಿಮೊಗರ್ಕಳ ಕೊರಗಜ್ಜ ಮತ್ತು ಪರಿವಾರ ದೈವಗಳ ದೈವಸ್ಥಾನಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಕ್ಷೇತ್ರದ ಮೊಕ್ತೇಸರ ವಿಶ್ವನಾಥ ಇವರನ್ನು ಗೌರವಿಸಿದರು. ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ಜೊತೆಗಿದ್ದರು. ಬಳಿಕ ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

NESARA|| WhatsApp ||GROUPS

                             

 

                                                       

 

Leave a Reply

error: Content is protected !!