ಉಡುಪಿ: ನಿಸರ್ಗೋಪಚಾರ ಆಯುರ್ವೇದ ಯೋಗ ತಜ್ಞ ವೈದ್ಯ ಡಾ.ಮುರಳೀಧರ್ ರಾವ್ ಗೆ ಜೆಸಿಐ ಕಮಲ ಪತ್ರ ಪುರಸ್ಕಾರ

ಶೇರ್ ಮಾಡಿ

ನೇಸರ ಸೆ.16: ಉಡುಪಿ ಜೆಸಿಐ ಜೇಸಿ ಸಪ್ತಾಹ ನಮಸ್ತೆ ಕಾರ್ಯಕ್ರಮ ಬ್ರಹ್ಮಗಿರಿ ಲಯನ್ಸ್ ಭವನದ ರಸ್ತೆಯ ಪಕ್ಕದಲ್ಲಿರುವ ನಿಯೋ ಲೈಫ್ ಆಯುವೇ೯ದ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಜೆಸಿಐ ಉಡುಪಿ ಸಿಟಿ ಅಧ್ಯಕ್ಷ ಡಾ.ವಿಜಯ ನೆಗಳೂರು ಅಧ್ಯಕ್ಷತೆಯನ್ನು ವಹಿಸಿದ್ದರು ۔ ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಜೆಸಿಐ ಉಡುಪಿ ಸಿಟಿ ಪೂರ್ವ ಅಧ್ಯಕ್ಷರು ಆಗಿರುವ ಸದಾ ಪೋಷಕರು ಜೆಸಿ ಭಾರತದ ಪೂರ್ವ ಉಪಾಧ್ಯಕ್ಷರು, ವಲಯ 15ರ ಪೂರ್ವಧ್ಯಕ್ಷರು ಆಗಿರುವ ಜೆಸಿ ಸೆನೆಟರ್ ಸಂದೀಪ್ ಕುಮಾರ್ ಕಮಲ ಪತ್ರ ವನ್ನು ಓದಿ, ಈ ವರ್ಷ ಜೆಸಿಐ ಉಡುಪಿ ಸಿಟಿ ಅತ್ಯುತ್ತಮ ಕಾರ್ಯಕ್ರಮಗಳಿಂದ ಬಹಳಷ್ಟು ಪ್ರಶಸ್ತಿಗಳನ್ನು ಪಡೆದಿದ್ದು ಮೆಚ್ಚುಗೆ ವ್ಯಕ್ತಪಡಿಸಿ ಡಾ.ಮುರಳಿಧರ ರಾವ್ ಅವರಿಗೆ ಕಮಲ ಪತ್ರ ಗೌರವ
ಪುರಸ್ಕಾರವನ್ನು ನೀಡಿ ಸನ್ಮಾನಿಸಿದರು.
ಗೌರವ ಪುರಸ್ಕಾರವನ್ನು ಸ್ವೀಕರಿಸಿದ ಡಾ.ಜೆಸಿ ಮುರಳಿಧರ್ ರಾವ್ ರವರು ಇನ್ನಷ್ಟು ಸಮಾಜಮುಖಿ ಸೇವೆಗಳನ್ನು ಮಾಡುವಲ್ಲಿ ಜವಾಬ್ದಾರಿ ಹೆಚ್ಚಾಗಿದೆ ಎಂದು ಕೃತಜ್ಞತೆಯನ್ನು ಸಲ್ಲಿಸಿದರು.
ಪೂರ್ವ ಅಧ್ಯಕ್ಷರಾಗಿರುವ ಜಗದೀಶ್ ಶೆಟ್ಟಿ ಸ್ವಾಗತಿಸಿ. ಜೆಸಿಐ ಉಡುಪಿ ಸಿಟಿ ನಿಯೋಜಿತ ಅಧ್ಯಕ್ಷ ಈ ವರ್ಷದ ವಲಯ XV ರ ವಲಯ ಅಧಿಕಾರಿ ಸಂಯೋಜಕರಾಗಿರುವ ಉದಯ ನಾಯ್ಕರವರು ಧನ್ಯವಾದಗಳೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

error: Content is protected !!