ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆರ್.ಡಿ.ಪಿ.ಆರ್. (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಸಮಾಲೋಚನಾ ಸಭೆ

ಶೇರ್ ಮಾಡಿ

ಬಂಟ್ವಾಳ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆರ್.ಡಿ.ಪಿ.ಆರ್. (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಸಮಾಲೋಚನಾ ಸಭೆ ರಾಜ್ಯಾಧ್ಯಕ್ಷರಾದ ಡಾ. ದೇವಿಪ್ರಸಾದ್ ಬೊಲ್ಮ ಅವರ ಅಧ್ಯಕ್ಷತೆಯಲ್ಲಿ ಸೆ.24 ರಂದು ಬಿ.ಸಿ. ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.
ಪಂಚಾಯತ್ ನೌಕರರು ಕಳೆದ ಮೂರು ದಶಕಗಳಿಂದ ಕೇವಲ ಕನಿಷ್ಠ ವೇತನಕ್ಕೆ ಗರಿಷ್ಠ ಸೇವೆಯನ್ನು ಗ್ರಾಮ ಪಂಚಾಯತ್ ನಲ್ಲಿ ನೀಡುತ್ತಾ ಬಂದಿದ್ದೇವೆ.

ಗ್ರಾಮ ಪಂಚಾಯತ್ ನಲ್ಲಿ ಸೇವೆ ಮಾಡುವ ನೌಕರರನ್ನು ಖಾಯಂಗೊಳಿಸಿ ಮತ್ತು ಡಿ.ಗ್ರೂಪ್ ನೌಕರರನ್ನಾಗಿ ನೇಮಕ ಮಾಡಬೇಕು ಎಂಬ ಒತ್ತಾಯ ಹಾಗೂ ಮುಂದಿನ ದಿನಗಳಲ್ಲಿ ನೌಕರರ ಶ್ರೇಯಕ್ಕೆ ಹಾಗೂ ಅಭಿವೃದ್ಧಿಗಾಗಿ ಹಾಗೂ ಅಗತ್ಯ ಮೂಲ ಸೌಕರ್ಯಗಳ ಪಡೆಯಲು ರಾಜ್ಯ ಮಟ್ಟದಲ್ಲಿ ಹೋರಾಟ ಮಾಡುವ ಬಗ್ಗೆ ಯೋಜನೆ ಹಮ್ಮಿಕೊಳ್ಳುವ ತೀರ್ಮಾನ ಮಾಡಿದ್ದೇವೆ. ಇದಕ್ಕೆ ಇತರ ಎಲ್ಲಾ ಸರಕಾರಿ ಸಂಘಟನೆಗಳ ಬೆಂಬಲವನ್ನು ಪಡೆಯಲಾಗುವುದು, ನಿಮ್ಮೆಲ್ಲರ ಸಂಪೂರ್ಣ ಸಹಕಾರ ಹೋರಾಟಕ್ಕೆ ನೀಡುವಂತೆ ಮನವಿ ಮಾಡಿದ ಅವರು, 2014 ರಿಂದ ಪಂಚಾಯತ್ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಹಾಗೂ ಮಾತುಕತೆಯ ಮೂಲಕ ಸಾಧ್ಯವಾದಷ್ಟು ಹೋರಾಟ ಮಾಡುತ್ತಾ ಬಂದಿದ್ದೇವೆ. ಜೊತೆಗೆ ಈಗಾಗಲೇ ನೌಕರರ ವಿಷಯದಲ್ಲಿ ಇಲಾಖೆಯಲ್ಲಿ ಇದ್ದ ಹಲವಾರು ನ್ಯೂನತೆ ಹಾಗೂ ಸಮಸ್ಯೆಗಳಿಗೆ ಇಲಾಖೆಗೆ ಒತ್ತಡ ತರುವ ಮೂಲಕ ಬದಲಾವಣೆ ತರಲಾಗಿದೆ. ಗ್ರಾಮ ಪಂಚಾಯತ್ ನೌಕರರ ಪ್ರತಿ ಸಮಸ್ಯೆಗಳ ಬಗ್ಗೆ ಸಂಘಟನೆಗೆ ಅರಿವಿದ್ದು, ರಾಜ್ಯ ಮಟ್ಟದ ಹೋರಾಟದ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದೇವೆ. ಆರ್ಥಿಕ ಹಾಗೂ ಜನ ಬೆಂಬಲವಿದ್ದು ಮುಂದಿನ ಪ್ರತಿಯೊಂದು ಹೋರಾಟಗಳಿಗೆ ನಮಗೆ ಖಂಡಿತ ಜಯ ಸಿಗಲಿದೆ, ಸಂಘದ ಎಲ್ಲಾ ಸದಸ್ಯರು ಒಗ್ಗಟ್ಟಿನ ಬಲಪ್ರದರ್ಶನ ಮಾಡಿದಾಗ ಸರಕಾರ ಎಚ್ಚೆತ್ತುಕೊಂಡು ನಮ್ಮ ಕೂಗಿಗೆ ಬೆಲೆ ನೀಡಬಹುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪಂಚಾಯತ್ ನೌಕರರಿದ್ದಾರೆ ಎಂಬುದನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸ ನಮ್ಮ ಸಂಘದ ಮೂಲಕ ಮಾಡಲಾಗಿದೆ. ನೌಕರರ ಹಲವಾರು ವೈಯಕ್ತಿಕ ಸಮಸ್ಯೆಗಳಿಗೆ ಸಂಘಟನೆ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಉತ್ತಮ ರೀತಿಯಲ್ಲಿ ನೌಕರರ ಸೇವೆಗಾಗಿ ಸದಾ ಸಿದ್ದವಿದೆ ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್ ಮುದ್ರಾಡಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಯಶೋಧರ ಶಿರ್ತಾಡಿ ,ಉಡುಪಿ ಜಿಲ್ಲಾ ಉಪಾಧ್ಯಕ್ಷ ಹೇಮಚಂದ್ರ ನಂದಳಿಕೆ, ಉಡುಪಿ ಜಿಲ್ಲಾ ಕೋಶಾಧಿಕಾರಿ ಸಚಿನ್ ಮಣಿಪುರ , ಉಡುಪಿ ಜಿಲ್ಲಾ ಸದಸ್ಯ ನಿತೇಶ್ ಕುಮಾರ್, ಮೂಡಬಿದರೆ ತಾ. ಸಮಿತಿ ಅಧ್ಯಕ್ಷ ರಾಕೇಶ್ ಕುಮಾರ್, ಬಂಟ್ವಾಳ ತಾ. ಸಮಿತಿ ಅಧ್ಯಕ್ಷ ಮೋಹನ್, ಪುತ್ತೂರು ತಾ. ಸಮಿತಿ ಅಧ್ಯಕ್ಷ ಹೊನ್ನಪ್ಪ, ಸುಳ್ಯ ತಾ. ಸಮಿತಿ ಅಧ್ಯಕ್ಷ ನೇತ್ರಾವತಿ, ಕಡಬ ತಾ. ಸಮಿತಿ ಅಧ್ಯಕ್ಷ ಪುಷ್ಪಾ ಜಯಂತ್, ಜಿಲ್ಲಾ ಸಂಘದ ಸದಸ್ಯ ಲಕ್ಷಣ್, ಬೆಳ್ತಂಗಡಿ ತಾ. ಸಮಿತಿ ಕಾರ್ಯದರ್ಶಿ ರುಕೇಶ್, ಕಾರ್ಕಳ ತಾ.ಸಂಘದ ನಿಕಟಪೂರ್ವ ಅಧ್ಯಕ್ಷ ಸೈಪುಲ್ಲಾ, ಸುಳ್ಯ ತಾ. ಸಮಿತಿ ಕಾರ್ಯದರ್ಶಿ ಯಶವಂತ, ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಸಂಘದ ಪ್ರಮುಖರ ಜೊತೆಯಲ್ಲಿ ಗ್ರಾ.ಪಂ.ನೌಕರರ ಸಮಸ್ಯೆಗಳ ಬಗ್ಗೆ ಎರಡು ತಾಸಿಗಿಂತಲೂ ಅಧಿಕ‌ ಕಾಲ ಮುಕ್ತವಾಗಿ ಚರ್ಚೆ ನಡೆಸಲಾಯಿತು. ನೌಕರರ ಪ್ರತಿ ಸಮಸ್ಯೆಗಳ ವಿವರ ಪಡೆದುಕೊಂಡ ಸಂಘದ ಪ್ರಮುಖರು ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಪರಿಹಾರಕ್ಕೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಯನ್ನು ಹಾಗೂ ಮಹಿಳಾ ಘಟಕ ಮತ್ತು ಹೋರಾಟ ಸಮಿತಿಯನ್ನು ರಚನೆ ಮಾಡಲಾಯಿತು.

ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರು ಹರೀಶ್ ಪೆರಾಬೆ, ಕಾರ್ಯದರ್ಶಿ ಜನಾರ್ಧನ ಕೊಂಬಾರು, ಜೊತೆ ಕಾರ್ಯದರ್ಶಿ ಗಿರೀಶ್ ನೆಲ್ಯಾಡಿ, ಸದಸ್ಯರು,: ಸತೀಶ್ ಕೊಣಾಜೆ, ಶಿವಪ್ರಸಾದ್ ನೆಲ್ಯಾಡಿ, ತಾರನಾಥ ಕುಟ್ರು ಪಾಡಿ, ಕೀರ್ತಿ ಕಾಣಿಯೂರು, ದುರ್ಗಾಪ್ರಸಾದ್ ರಾಮಕುಂಜ, ಜೀವಿಶ್ ಕುಟ್ರು ಪಾಡಿ, ಲೋಕನಾಥ್ ಕೊಂಬಾರು
ಮಹಿಳಾ ಘಟಕ ಅಧ್ಯಕ್ಷರು ಮಮತಾ ಬೆಳಂದೂರು, ಕಾರ್ಯದರ್ಶಿ ಚಂದ್ರಾವತಿ ಸುಬ್ರಹ್ಮಣ್ಯ, ಸದಸ್ಯರು ಹೇಮಾವತಿ ಆಲಂಕಾರು, ಭವ್ಯ ನೆಲ್ಯಾಡಿ, ಪದ್ಮಾವತಿ ಪೆರಾಬೆ, ಮಂಜುಳ ಕೌಕ್ರಾಡಿ , ಸ್ಮಿತಾ ಶಿರಾಡಿ ಆಯ್ಕೆ ಮಾಡಲಾಯಿತು.

Leave a Reply

error: Content is protected !!