ಜೇಸಿಐ ಪಂಜ ಪಂಚಶ್ರೀ ಬೆಳ್ಳಿ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಶೇರ್ ಮಾಡಿ

ಪಂಜ: ಜೇಸಿಐ ಪಂಜ ಪಂಚಶ್ರೀಯ ಬೆಳ್ಳಿ ಹಬ್ಬ ‘ರಜತ ರಶ್ಮಿ’ ಪ್ರಯುಕ್ತ ‘ರಜತ ಚಿತ್ತಾರ’ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ಮೊದಲ ಹಂತ ಆನ್ ಲೈನ್ ಮುಖಾಂತರ ನಡೆಯಲಿದ್ದು ಚಿತ್ರಗಳನ್ನು ವಾಟ್ಸಪ್ ನಲ್ಲಿ ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ 25.
ಪ್ರಥಮ ಸುತ್ತಿನಲ್ಲಿ ಪ್ರತೀ ವಿಭಾಗದಿಂದ ತಲಾ 20 ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಿದ್ದು ಆಯ್ಕೆಯಾದವರು ಅಂತಿಮ ಸುತ್ತಿನಲ್ಲಿ ನವೆಂಬರ್ 11ರಂದು ತೀರ್ಪುಗಾರರ ಎದುರು ನೇರವಾಗಿ ಭಾಗವಹಿಸಿ ಚಿತ್ರಗಳನ್ನು ರಚಿಸಬೇಕು. ಪ್ರತೀ ವಿಭಾಗದಲ್ಲಿ ತಲಾ ಹತ್ತು ಬಹುಮಾನಗಳಿದ್ದು ನಗದು ಬಹುಮಾನ, ಪ್ರಶಸ್ತಿ ಪತ್ರ, ಟ್ರೋಫಿಗಳಲ್ಲದೆ ಆಕರ್ಷಕ ಗಿಫ್ಟ್ ಹ್ಯಾಂಪರ್ ಗಳನ್ನು ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ 7483853515,9880673233,9686350858 ನಂಬರನ್ನು ಸಂಪರ್ಕಿಸಬಹುದು
.

Leave a Reply

error: Content is protected !!