![](https://i0.wp.com/nesaranewsworld.com/wp-content/uploads/2022/10/WhatsApp-Image-2022-10-30-at-11.15.32-AM-1.jpeg?resize=1024%2C401&ssl=1)
ಸುಬ್ರಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರಾಂತ್ಯ ಶಿಬಿರವನ್ನು ದಿನಾಂಕ 29.10.2022 ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಯಿತು.
ಕಾಲೇಜು ಕ್ರೀಡಾಂಗಣದ ದುರಸ್ತಿ ಹಾಗೂ ಇತರ ಕೆಲಸಗಳಲ್ಲಿ ಸ್ವಯಂಸೇವಕರು ತಮ್ಮನ್ನು ತೊಡಗಿಸಿಕೊಂಡರು. ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ ನಾಯಕ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿಗಳಾದ ಶ್ರೀಮತಿ ಆರತಿ ಹಾಗೂ ಕುಮಾರ್ ಶೇಣಿ ಕಾರ್ಯಕ್ರಮವನ್ನು ಸಂಯೋಜಿಸಿದರು.
![](https://i0.wp.com/nesaranewsworld.com/wp-content/uploads/2022/10/WhatsApp-Image-2022-10-30-at-11.15.32-AM.jpeg?resize=1024%2C413&ssl=1)
ರಾಷ್ಟ್ರೀಯ ಸೇವಾ ಯೋಜನೆ ಘಟಕದ ನಾಯಕರುಗಳಾದ ತರುಣ್, ಸುಪ್ರೀತ್, ನಮಿತಾ ಕೆ, ವೈಷ್ಣವಿ . ಶಿಬಿರವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರು ಶ್ರಮದಾನದಲ್ಲಿ ಸಹಕರಿಸಿದರು.
![](https://i0.wp.com/nesaranewsworld.com/wp-content/uploads/2022/10/WhatsApp-Image-2022-02-03-at-4.36.31-PM-73.jpeg?resize=835%2C935&ssl=1)
![](https://i0.wp.com/nesaranewsworld.com/wp-content/uploads/2022/10/WhatsApp-Image-2022-07-19-at-2.27.21-PM-1-52.jpeg?resize=910%2C1024&ssl=1)
![](https://i0.wp.com/nesaranewsworld.com/wp-content/uploads/2022/10/WhatsApp-Image-2022-07-19-at-2.27.21-PM-101.jpeg?resize=910%2C1024&ssl=1)
![](https://i0.wp.com/nesaranewsworld.com/wp-content/uploads/2022/10/WhatsApp-Image-2022-07-19-at-3.14.00-PM-115.jpeg?resize=914%2C1024&ssl=1)
![](https://i0.wp.com/nesaranewsworld.com/wp-content/uploads/2022/10/WhatsApp-Image-2022-07-26-at-12.12.17-PM-64.jpeg?resize=910%2C1024&ssl=1)