ನೆಲ್ಯಾಡಿ: ಪರಿಶಿಷ್ಟ ಜಾತಿ/ ಪಂಗಡದವರ 25% ನಿಧಿಯಿಂದ 30 ಕುಟುಂಬಗಳಿಗೆ ಡಿನ್ನರ್ ಸೆಟ್ ವಿತರಣೆ

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿನ ಗಾಂಧಿ ಮೈದಾನದ ಗೆಳೆಯರ ಬಳಗ ರಂಗವೇದಿಕೆಯಲ್ಲಿ ನೆಲ್ಯಾಡಿ 2ನೇ ವಾರ್ಡಿನ ಪರಿಶಿಷ್ಟ ಜಾತಿ/ ಪಂಗಡದವರ 25% ನಿಧಿಯಿಂದ 30 ಕುಟುಂಬಗಳಿಗೆ ಡಿನ್ನರ್ ಸೆಟ್ ವಿತರಿಸುವ ಕಾರ್ಯಕ್ರಮ ನವೆಂಬರ್ 19ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಗ್ರಾಮ ಪಂಚಾಯತ್ ನ ಸದಸ್ಯರಾದ ಇಕ್ಬಾಲ್ ವಹಿಸಿದ್ದರು. ಪ್ರಧಾನ ಭಾಷಣಕಾರರಾಗಿ ದಲಿತ್ ಸೇವಾ ಸಮಿತಿಯ ಜಿಲ್ಲಾ ಸ್ಥಾಪಕ ಅಧ್ಯಕ್ಷರಾದ ಸೇಸಪ್ಪ ಬೆದ್ರಕಾಡು, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚೇತನ, ನೆಲ್ಯಾಡಿ ಗ್ರಾಮ ಪಂಚಾಯತ್ ನ ಸದಸ್ಯೆ ಶ್ರೀಮತಿ ರೇಷ್ಮಾ ಶಶಿ, ಹಿರಿಯ ದಲಿತ ಮುಖಂಡರಾದ ಕೆ ಪಿ ಆನಂದ ಪಡುಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
30 ಕುಟುಂಬಗಳಿಗೆ ಡಿನ್ನರ್ ಸೆಟ್ ಈ ಸಂದರ್ಭದಲ್ಲಿ ವಿತರಿಸಲಾಯಿತು. ಶ್ರೀಮತಿ ರೇಷ್ಮಾ ಶಶಿ ಕಾರ್ಯಕ್ರಮ ನಿರೂಪಣೆ ಹಾಗೂ ಧನ್ಯವಾದ ಸಲ್ಲಿಸಿದರು.

Leave a Reply

error: Content is protected !!