ನೆಲ್ಯಾಡಿ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿನ ಪಡುಬೆಟ್ಟು ಎಂಬಲ್ಲಿ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರಗಿದೆ.
ಶಿವಪ್ಪ ಎಂಬವರ ಪತ್ನಿ ಕುಶಲಾವತಿ(45) ಕಳೆದ ಹಲವು ಸಮಯದಿಂದ ಮಧುಮೇಹದಿಂದ ಬಳಲುತ್ತಿದ್ದು ಗ್ಯಾಂಗ್ರಿನ್ ಹಂತವನ್ನು ತಲುಪಿತ್ತು. ಇದರಿಂದ ಮನನೊಂದ ಆಕೆ ಸೋಮವಾರ ರಾತ್ರಿ ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಪತಿ ಹಾಗೂ ಪುತ್ರಿ ಇದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Leave a Reply

error: Content is protected !!