ನೆಲ್ಯಾಡಿ: ಕಾಣೆಯಾದ ಬೈಕ್ ಪತ್ತೆ ; ವಶಕ್ಕೆ ಪಡೆದ ಪೋಲಿಸರು

ಶೇರ್ ಮಾಡಿ

ನೆಲ್ಯಾಡಿ: ಮಂಗಳೂರು ಕದ್ರಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ವೃತ್ತಿಯಲ್ಲಿ ಪ್ಲಂಬರ್ ಕೆಲಸ ಮಾಡುತ್ತಿದ್ದ ಜಿತೇಂದ್ರ ಕುಮಾರ್ ಎಂಬವರು ಕೆಲಸ ಮಾಡುತ್ತಿದ್ದ ಮಾಲಕರ ಬೈಕಿನೊಂದಿಗೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಮಾಹಿತಿ ಪಡೆದ ನೆಲ್ಯಾಡಿ ಪೋಲಿಸ್ ಠಾಣೆಯ ನೆಲ್ಯಾಡಿ ಹೊರಠಾಣಾ ಹೆಡ್ ಕಾನ್ಸ್ಟೇಬಲ್ ಕುಶಾಲಪ್ಪ ಹಾಗೂ ಸಿಬ್ಬಂದಿಗಳು ಇಂದು ಕೆ ಎಸ್ ಆರ್ ಟಿ ಸಿ ಬಳಿ ಬೈಕನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಕದ್ರಿ ಪೊಲೀಸ್ ಸ್ಟೇಷನಿಗೆ ಮಾಹಿತಿ ನೀಡಿರುತ್ತಾರೆ.

Leave a Reply

error: Content is protected !!