40 ವರುಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಕಡಬ ಪೊಲೀಸರು

ಶೇರ್ ಮಾಡಿ

ಕಡಬ: ಪೊಲೀಸ್ ಠಾಣಾ ಅ,ಕ್ರ 53/1984 ಕಲಂ. 62, 71(a), 80,86,87 KF ಆಕ್ಟ್ ಜೊತೆಗೆ 379,411 ಐಪಿಸಿ ಯಂತೆ ಶ್ರೀಗಂಧ ಹಾಗೂ ವಾಹನ ಕಳವು ಪ್ರಕರಣದಲ್ಲಿ ಆರೋಪಿಯಾಗಿ ಸುಮಾರು 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಕಡಬ ಠಾಣಾ ಪೊಲೀಸರು.

ಸಕಲೇಶಪುರ ತಾಲೂಕು ಕೊಡಿಗೆ ಗ್ರಾಮ ಕಾಡೂರು ನಿವಾಸಿ ಅಬೂಬಕ್ಕರ್(ವ.63) ಬಂಧಿತ ಆರೋಪಿ. ಎಲ್ ಪಿ ಸಿ ವಾರೆಂಟ್ ಆರೋಪಿಯನ್ನು ಪುತ್ತೂರು ಗ್ರಾಮಾಂತರ ವೃತ ನಿರೀಕ್ಷಕರಾದ ರವಿ ಬಿಎಸ್ ಮತ್ತು ಕಡಬ ಠಾಣಾ ಉಪನಿರೀಕ್ಷಕರಾದ ಹರೀಶ್ ಆರ್ ರವರ ಹಾಗೂ ಎ ಎಸ್ ಐ ಶಿವರಾಮ ರವರ ಮಾರ್ಗದರ್ಶನದಲ್ಲಿ ಕಡಬ ಠಾಣಾ ಹೆಚ್.ಸಿ ರಾಜು ನಾಯಕ್, ಹೆಚ್.ಸಿ ಭವಿತ್ ರಾಜ್ ಮತ್ತು ಪಿ ಸಿ ಸಿರಾಜುದ್ದೀನ್ ಎಂಬುವರು ಮೂಡಿಗೆರೆ ತಾಲೂಕು ಬಾಳೂರು ಎಂಬಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
ಆರೋಪಿಯ ವಿರುದ್ಧ ರಾಣೇಬೆನ್ನೂರು ಪೊಲೀಸ್ ಠಾಣಾ ಅಕ್ರ ,12/1985 ಕಲಂ 279,337, 411 ಐಪಿಸಿ ಮತ್ತು ಕಲಂ 86,87 ಕೆ ಎಫ್ ಆಕ್ಟ್, ಮೈಸೂರು ವಿವಿ ಪುರಂ ಪೊಲೀಸ್ ಠಾಣಾ ಅಕ್ರ 159/1984 ಕಲಂ, 379 ಐಪಿಸಿ ಪ್ರಕರಣಗಳಲ್ಲೂ ವಾರಂಟ್ ಜಾರಿಯಾಗಿದೆ.

Leave a Reply

error: Content is protected !!