ಇಚ್ಲಂಪಾಡಿ: ನೇರ್ಲ ಸಂಕೀರ್ಣದ ಬಳಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಜನ್ಮ ದಿನದ ಪ್ರಯುಕ್ತ ಅಪ್ಪು ಮೆಲೋಡಿಸ್ ಅರ್ಪಿಸುವ ರಸಮಂಜರಿ , ಡ್ಯಾನ್ಸ್ ಇನ್ಸಿಟ್ಯೂಟ್ ಅವಾರ್ಡ್ ಪುರಸ್ಕೃತ ಜೇಸಿ ಕುಶಾಲಪ್ಪ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇವರಿಂದ ನಾಟ್ಯ ವೈಭವ

ಶೇರ್ ಮಾಡಿ

ಇಚ್ಲಂಪಾಡಿ: ನೇರ್ಲ ಸಂಕೀರ್ಣದ ಬಳಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಜನ್ಮ ದಿನದ ಪ್ರಯುಕ್ತ ಅಪ್ಪು ಮೆಲೋಡಿಸ್ ಹಾಗೂ ಡ್ಯಾನ್ಸ್ ಇನ್ಸಿಟ್ಯೂಟ್ ಅವಾರ್ಡ್ ಪುರಸ್ಕೃತ ಜೇಸಿ ಕುಶಾಲಪ್ಪ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇವರಿಂದ ನಾಟ್ಯ ವೈಭವ

ದಿನಾಂಕ 17-3-2023ನೇ ಶುಕ್ರವಾರ ರಾತ್ರಿ 7.30 ಗಂಟೆಯಿಂದ ಇಚ್ಲಂಪಾಡಿಯ ನೇರ್ಲ ಸಂಕೀರ್ಣದ ಬಳಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಜನ್ಮ ದಿನದ ಪ್ರಯುಕ್ತ ಅಪ್ಪು ಮೆಲೋಡಿಸ್ ಇಚ್ಲಂಪಾಡಿ ಅರ್ಪಿಸುವ ರಸಮಂಜರಿ ಕಾರ್ಯಕ್ರಮ ನಡೆಯಲಿದೆ..  ಗಾಯಕರಾದ ಗಣೇಶ್ ಮಂಗಳೂರು, ಶ್ರೀ ವಿದ್ಯಾ ಮಂಗಳೂರು, ಸಫ್ವಾನ್ ಸಾಲೆತ್ತೂರು, ಜ್ಯೋತಿ ಮಂಗಳೂರು,ಸಂತೋಷ್ ಶೆಟ್ಟಿ ಇರಾ ಇವರಿಂದ ಗೀತ ಗಾಯನ  ಹಾಗೂ ಬೆಸ್ಟ್ ಡ್ಯಾನ್ಸ್ ಇನ್ಸಿಟ್ಯೂಟ್ ಅವಾರ್ಡ್ ಪುರಸ್ಕೃತ ಜೇಸಿ ಕುಶಾಲಪ್ಪ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇವರಿಂದ ನಾಟ್ಯ ವೈಭವ ನಡೆಯಲಿದೆ. ಸ್ಥಳ ದಾನ ನೀಡಿ ಸಹಕಾರ ನೀಡಲಿರುವ ವಿಶ್ವನಾಥ ಗೌಡ ಹಾಗೂ ಮಕ್ಕಳು ನೇರ್ಲ, ಇಚ್ಲಂಪಾಡಿ, ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿಕೊಡುವ   ಸತೀಶ್ ಪೂಜಾರಿ ಇಚ್ಲಂಪಾಡಿ, ಕಾರ್ಯಕ್ರಮ ಕ್ಕೆ ಧ್ವನಿ ಮತ್ತು ಬೆಳಕು ವಿಜಿತ್ ಇವೆಂಟ್ಸ್ ಮರ್ಧಾಳ ಎಂದು ಅಪ್ಪು ಮೆಲೋಡಿಸ್ ಆಡಳಿತ ಸಮಿತಿ ತಿಳಿಸಿದೆ.

ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ದೋಂತಿಲ ನಿವಾಸಿ ಐಸಮ್ಮ(ವ.75)ಎಂಬ ಮಹಿಳೆ ಕಾಣೆಯಾಗಿರುವ ಬಗ್ಗೆ ಅವರ ಮಗ ಮಹಮ್ಮದ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಐಸಮ್ಮ ಅವರು ಫೆ.28ರಂದು ಸಂಜೆ 6.30ಕ್ಕೆ ಮನೆಯಿಂದ ಹೊರಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಅಕ್ಕ ಪಕ್ಕದ ಪರಿಸರದಲ್ಲಿ ಎಲ್ಲಿ ಹುಡುಕಾಡಿದರು ಅವರ ಪತ್ತೆಯಾದ ಕಾರಣ. ಅವರ ಪತ್ತೆಗಾಗಿ ಮಗ ಮಹಮ್ಮದ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಎಲ್ಲಿಯಾದರೂ ಕಂಡು ಬಂದಲ್ಲಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ
ಸಂಪರ್ಕಿಸುವ ಸಂಖ್ಯೆ:
+91 9741300792
+91 9071503313

Leave a Reply

error: Content is protected !!