ನೆಲ್ಯಾಡಿ :ನಾಯರ್ ಸರ್ವಿಸ್ ಸೊಸೈಟಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಶೇರ್ ಮಾಡಿ

ನೇಸರ ಮಾ .12:ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ,ನೆಲ್ಯಾಡಿ ಕರಯೋಗಂ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮವು ಇಂದು ಸೊಸೈಟಿಯ ಸಭಾಭವನದಲ್ಲಿ “ಮಹಿಳಾ ವಿಭಾಗ ,ಐಶ್ವರ್ಯ” ನೇತೃತ್ವದಲ್ಲಿ ನಡೆಯಿತು. ನಾಯರ್ ಸರ್ವಿಸ್ ಸೊಸೈಟಿಯ ಅಧ್ಯಕ್ಷರು ,ಬೋರ್ಡ್ ಮೆಂಬರ್ಸ್ ,ಸಂಚಾಲಕರು ಹಾಗೂ ಸರ್ವ ಸದಸ್ಯರು ಒಟ್ಟು ಸೇರಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು .

ನಾಯರ್ ಸರ್ವಿಸ್ ಸೊಸೈಟಿ ನೆಲ್ಯಾಡಿ ಕರಯೋಗಂ ಅಧ್ಯಕ್ಷರು ಉನ್ನಿಕೃಷ್ಣನ್ ನಾಯರ್ ,ಉಪಾಧ್ಯಕ್ಷರು ಮಹೇಶ್ ಕುಮಾರ್ , ಶ್ರೀಲತಾ ಮೋಹನ್ ,ಕಾರ್ಯದರ್ಶಿ ವಿನೋದ್ ಕುಮಾರ್ ,ಜೊತೆ ಕಾರ್ಯದರ್ಶಿ ರಾಜೇಶ್ ಕುಮಾರ್  ಬೋರ್ಡ್ ಮೆಂಬರ್ ಗಳಾದ ಶಿವದಾಸನ್ ಪಿಳ್ಳೈ ,ರಘುನಾಥನ್ ನಾಯರ್ , ಚಂದ್ರಶೇಖರನ್ ನಾಯರ್,ಸಂಚಾಲಕರು ,ಮಹಿಳಾ ವಿಭಾಗದ ಅಧ್ಯಕ್ಷೆ ತಂಗಮಣಿ ಅಮ್ಮ,ಕಾರ್ಯದರ್ಶಿ ಶ್ರೀಜಾ ವಿನೋದ್ , ಶಕುಂತಲಾ ವಿನೋದ್ ಹಾಗೂ ನಾಯರ್ ಸರ್ವಿಸ್ ಸೊಸೈಟಿ ಬೆಂಗಳೂರು ,ಮಂಗಳೂರು , ನೆಟ್ಟಣ ,ಉಜಿರೆ ,ಬೆಳ್ತಂಗಡಿ ,ಕೊಕ್ಕಡ ,ಸುಳ್ಯದ  ಸದ್ಯಸರು ಉಪಸ್ಥಿತರಿದ್ದರು .

ಶ್ರೀಜಾ ಸಂದೀಪ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು,ಜಿಶಾ ದಿಲೀಪ್ ಉಜಿರೆ , ಪ್ರಾರ್ಥನೆ,ಶ್ರೀಜಾ ವಿನೋದ್ ಇಚ್ಲಂಪಾಡಿ ಅವರಿಂದ ಸ್ವಾಗತ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ತಂಗಮಣಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಶ್ರೀಮತಿ ಇಂದಿರಾ ಅಮ್ಮ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು https://nss.org.in/

http://nss.org.in/

ರಾಮನಗರ ಬಲ್ಯ – 17ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

🌸ಜಾಹೀರಾತು🌸

Leave a Reply

error: Content is protected !!