ಪ್ರಧಾನ ಮಂತ್ರಿ ಡಿಜಿಟಲ್ ಲಿಟರರಿ ಮಿಷನ್ ಕಾರ್ಯಕ್ರಮದಡಿಯಲ್ಲಿ ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮ

ಶೇರ್ ಮಾಡಿ

ನೇಸರ 19: ಸರಕಾರಿ ಪದವಿಪೂರ್ವ ಕಾಲೇಜು ಕಡಬ ಇದರ ರಾಷ್ಟೀಯ ಸೇವಾ ಯೋಜನೆಯ ಘಟಕದ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿ ಡಿಜಿಟಲ್ ಲಿಟರರಿ ಮಿಷನ್ ಕಾರ್ಯಕ್ರಮದಡಿಯಲ್ಲಿ ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮವನ್ನು ಸ್ಥಳೀಯ ಐಐಸಿಟಿ ಕಂಪ್ಯೂಟರ್ ಸಂಸ್ಥೆಯ ಮುಖ್ಯಸ್ಥರು ಹಾಗೂ ತರಬೇತುದಾರ ರಾಷ್ಟೀಯ ಸೇವಾ ಯೋಜನೆಯ ರಾಜ್ಯ ಪ್ರಶ್ಯಸ್ತಿ ವಿಜೇತ ಶ್ರೀ ಪ್ರಶಾಂತ ಸಿ ಎಚ್ ರವರ ನೇತೃತ್ವದಲ್ಲಿ ಕುಮಾರಿ ಐಶ್ವರ್ಯ ಮತ್ತು ಶ್ರೀಮತಿ ಸುಧಾ ಇವರು ನಡೆಸಿಕೊಟ್ಟರು. ಕಾಲೇಜಿನ ಸುಮಾರು 250 ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಇದರ ಪ್ರಯೋಜನ ಪಡೆದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜನಾರ್ಧನ ಕೆ.ಎಸ್ ಕಾರ್ಯಕ್ರಮ ಉದ್ಘಾಟಸಿ ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ಮಾದ್ಯಮ ಪ್ರತೀಯೊಬ್ಬರಿಗೂ ಅತೀ ಅವಶ್ಯ ಎಂದು ನುಡಿದರು, ಕಾರ್ಯಕ್ರಮಕ್ಕೆ ಶುಭ ಕೋರಿದರು. ರಾಷ್ಟೀಯ ಸೇವಾ ಯೋಜನೆಯ ಘಟಕದ ಕಾರ್ಯಕ್ರಮಾಧಿಕಾರಿ ಶ್ರೀ ಸಲೀನ್ ಕೆ.ಪಿ ಕಾರ್ಯಕ್ರಮ ಆಯೋಜಿಸಿದರು. ಎಲ್ಲಾ ಉಪನ್ಯಾಸಕರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು

Leave a Reply

error: Content is protected !!