ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ಏಕಹಾ ಭಜನೆಯಲ್ಲಿ ಉದನೆ ಚಂದ್ರಶೇಖರ್ ರವರ ಚಿಕಿತ್ಸೆಯ ನೆರವಾಗಿ ನಿಧಿ ಸಂಗ್ರಹ; ಹಸ್ತಾಂತರ

ಶೇರ್ ಮಾಡಿ

ಕಡಬ:ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ (ರಿ) ದ.ಕ ಕರ್ನಾಟಕ ಇವರ ವತಿಯಿಂದ ಮತ್ತು ಯುವವಾಹಿನಿ(ರಿ) ಕಡಬ ಘಟಕದ ಸಹಕಾರದಲ್ಲಿ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ಏಕಹಾ ಭಜನೆಯ ಸಂಭ್ರಮದಲ್ಲಿ ಉದನೆ ಬನಾರಿ ನಿವಾಸಿ ಚಂದ್ರಶೇಖರ್ ಇವರ ಚಿಕಿತ್ಸೆಯ ನೆರವಾಗಿ ನಿಧಿ ಸಂಗ್ರಹ ಅಭಿಯಾನ ನಡೆಯಿತು.

ಈ ಅಭಿಯಾನದಲ್ಲಿ ಸಂಗ್ರಹವಾದ ಹಣವನ್ನು ಚೆಕ್ ಮೂಲಕ ದಿನಾಂಕ.03.04 2023 ರಂದು ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಸಂಗ್ರಹವಾದ ಮೊತ್ತ 29,910 ರೂ ಯನ್ನು ಕಡಬ ಆರಕ್ಷಕ ಠಾಣಾ ಉಪನಿರೀಕ್ಷರಾದ ಹರೀಶ್ ಅವರು ಚಂದ್ರಶೇಖರ್ ಅವರ ಮನೆಯವರಿಗೆ ಹಸ್ತಾಂತರಿಸಿದರು.
ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸೀತಾರಾಮ ಪೊಸವಳಿಕೆ, ಮತ್ತು ಏಕಹಾ ಭಜನೆಯ ಅಧ್ಯಕ್ಷರಾದ ಅಜಿತ್ ರೈ ಆರ್ತಿಲ,ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಯ ಗೌರವಧ್ಯಕ್ಷ ಉದಯ್ ಭಟ್, ಅಧ್ಯಕ್ಷ ಡಿ.ಎಸ್. ಒಡ್ಯ, ಕಾರ್ಯದರ್ಶಿ ಮನೋಹರ್ ಪಲಯಮಜಲು, ಯುವವಾಹಿನಿ ಅಧ್ಯಕ್ಷರಾದ ಕೃಷ್ಣಪ್ಪ ಅಮೈ, ಯುವವಾಹಿನಿಯ ಕೇಂದ್ರ ಸಮಿತಿ ನಿರ್ದೇಶಕರಾದ ಶಿವಪ್ರಸಾದ್ ನೂಚಿಲ, ನವೀನ್ ಕೊಂಬಾರು, ಠಾಣಾ ಸಿಬ್ಬಂದಿ ಭವಿತ್ ರೈ, ಏಕಹಾ ಭಜನಾ ಸಮಿತಿಯ ಕೋಶಾಧಿಕಾರಿ ಸೀತಾರಾಮ ಉಪಸ್ಥಿತರಿದ್ದರು.

Leave a Reply

error: Content is protected !!