ಕಾರ್ಕಳ : ಸ್ಫೋಟಕ ವಸ್ತು ಸಾಗಾಟ; ಮೂವರು ಆರೋಪಿಗಳ ಬಂಧನ

ಶೇರ್ ಮಾಡಿ

ಕಾರ್ಕಳ : ಸಾಣೂರು ಮುರತ್ತಂಗಡಿ ಚುನಾವಣಾ ಚೆಕ್ಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ವಾಹನ ತಪಾಸಣೆ ಮಾಡುತ್ತಿದ್ದಾಗ ಮೂಡಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ 2 ದ್ವಿಚಕ್ರ ವಾಹನ ನಿಲ್ಲಿಸಿ ಪರಿಶೀಲಿಸಿದಾಗ ಸ್ಫೋಟಕ ವಸ್ತು ಪತ್ತೆಯಾಗಿದೆ.

ಮಂಗಳೂರು ಪಚ್ಚನಾಡಿ ನಿವಾಸಿ ಆರೋಪಿಗಳಾದ ನಾಗರಾಜ, ಶಂಕರ, ರಾಘವೇಂದ್ರ ಎಂಬವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಈ ಬಗ್ಗೆ ಚೆಕ್ಕ್ ಪೋಸ್ಟ್ ಅಧಿಕಾರಿ ರಾಜರಾಮ್ ಶೇರ್ವೆಗಾರ್ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!